ವದಂತಿಗಳಿಗೆ ಕಿವಿಗೊಡಬೇಡಿ, ನಾನು ಮೋದಿ ಅನುಯಾಯಿ

ವದಂತಿಗಳಿಗೆ ಕಿವಿಗೊಡಬೇಡಿ,  ನಾನು ಮೋದಿ ಅನುಯಾಯಿ

ಬಿಜೆಪಿ ಮುಖಂಡ ಚಂದ್ರಶೇಖರ್ ಪೂಜಾರ್

ಹರಿಹರ, ಏ.14- ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತಾರೆ ಎಂಬುದು ಶುದ್ಧ ಸುಳ್ಳು, ಇಂತಹ ವದಂತಿಗಳನ್ನು ಯಾರು ನಂಬಬೇಡಿ ಎಂದು ಬಿಜೆಪಿ ಮುಖಂಡ ಚಂದ್ರಶೇಖರ್ ಪೂಜಾರ್ ತಿಳಿಸಿದರು.

ಜನತಾವಾಣಿಯೊಂದಿಗೆ ಮಾತನಾಡಿದ ಅವರು, ಬಿಜೆಪಿ ಸೇರಿದ ನಂತರ ನನ್ನ ಸಾಮಾಜಿಕ ಸೇವೆ ಗಮನಿಸಿ ಕ್ಷೇತ್ರದ ಜನರೇ ಶಾಸಕ ಆಗುವಂತೆ ಒತ್ತಾಯಿಸಿದ್ದರು. ಆದರೆ ಪಕ್ಷದ ಹಿರಿಯರು  ಬಿ.ಪಿ. ಹರೀಶ್‌ ಅವರಿಗೆ ಟಿಕೆಟ್‌ ಕೊಡಿಸಿದಾಗಲೂ ವಿಚಲಿತನಾಗದೇ, ಪಕ್ಷದ ಸೇವೆ ಮಾಡಿ ಹರೀಶರನ್ನು ಗೆಲ್ಲಿಸಿದ್ದೆವು ಎಂದು ಹೇಳಿದರು. 

ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕಾರ ಮೆಚ್ಚಿ ನಾನು ಬಿಜೆಪಿಗೆ ಸೇರಿದ್ದೇನೆ. ಆದ್ದರಿಂದ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯಾಗಿಸುವ ದೃಷ್ಟಿಯಿಂದ ಗಾಯತ್ರಿ ಸಿದ್ದೇಶ್ವರರನ್ನು ಹೆಚ್ಚಿನ ಮತಗಳಿಂದ ಗೆಲ್ಲಿಸುವ ನಿಟ್ಟಿನಲ್ಲಿ ನಾನು, ಜನಾಕರ್ಷಿಸುವುದನ್ನು ಕೆಲವರಿಗೆ ಸಹಿಸಲಾಗುತ್ತಿಲ್ಲ  ಎಂದರು.

ನನ್ನ ಕಾರ್ಯ ಚಟುವಟಿಕೆ ಸಹಿಸದ ಕೆಲವರು, ಬಿಜೆಪಿ ಮತ್ತು ಜೆಡಿಎಸ್‌ ಪಕ್ಷ ಒಂದುಗೂಡಿ ಪ್ರಚಾರ ನಡೆಸುತ್ತಿರುವುದರಿಂದ  ಚಂದ್ರಶೇಖರ್ ಪೂಜಾರ್ ಅವರಿಗೆ ಪಕ್ಷದಲ್ಲಿ ಸರಿಯಾದ ಮಾನ್ಯತೆ ಸಿಗುತ್ತಿಲ್ಲ. ಆದ್ದರಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರಲು ಚಿಂತನೆ ನಡೆಸಿದ್ದಾರೆ ಎಂದು ಸುಳ್ಳು ವದಂತಿ ಹಬ್ಬಿಸುತ್ತಿದ್ದಾರೆ ಎಂದು ದೂರಿದರು.

ನಾನು ಅಪ್ಪಟ ಮೋದಿ ಅವರ ಅಭಿಮಾನಿ, ದೇಶದಲ್ಲಿ ಮತ್ತೊಮ್ಮೆ ಮೋದಿಜೀ ಪ್ರಧಾನಿಯಾಗಬೇಕು ಮತ್ತು ಅವರು ಕಂಡ ಕನಸಿಗೆ ಪೂರಕವಾಗಿ ಪಕ್ಷದಲ್ಲಿ ಶಿಸ್ತಿನ ಸಿಪಾಯಿಯಂತೆ ಬಿಜೆಪಿಗೆ ಬದ್ದನಾಗಿ ಲೋಕಸಭಾ ಚುನಾವಣೆಯಲ್ಲಿ ಕೆಲಸ ಮಾಡುತ್ತಿರವುದಾಗಿ ಹೇಳಿದರು.

error: Content is protected !!