ಲೋಕಾಸಭಾ ಚುನಾವಣೆಯ ಪ್ರಯುಕ್ತ ಜಿಲ್ಲಾಡಳಿತ, ಸ್ವೀಪ್ ಸಮಿತಿ, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಮಹಾನಗರ ಪಾಲಿಕೆ ಇವರ ಸಹಯೋಗದಲ್ಲಿ ಮತದಾನದ ಜಾಗೃತಿಯ ಅಂಗವಾಗಿ ಇಂದು ಬೆಳಿಗ್ಗೆ 9.30ಕ್ಕೆ ಮಹಿಳೆಯರಿಂದ ಬೈಕ್ ರ್ಯಾಲಿ ನಡೆಯಲಿದೆ.
ರ್ಯಾಲಿಯು ಪಿ.ಬಿ ರಸ್ತೆಯ ಡಿ.ಆರ್.ಆರ್. ಸ್ಕೂಲ್ನಿಂದ ಪ್ರಾರಂಭಗೊಂಡು ಹೊಸ ಕೆಎಸ್ಆರ್ಟಿಸಿ ಬಸ್ ನಿಲ್ದಾಣ, ಭಗತ್ಸಿಂಗ್ ನಗರ, ಕೆ.ಟಿ.ಜೆ ನಗರ ಪೊಲೀಸ್ ಸ್ಟೇಷನ್, ಎಚ್ಕೆಆರ್ ಸರ್ಕಲ್ ದುರ್ಗಾಂಬಿಕ ದೇವಸ್ಥಾನ ಮತ್ತು ನಿಟ್ಟುವಳ್ಳಿ ಮಾರ್ಗವಾಗಿ ಐಟಿಐ ಗೇಟ್ವರೆಗೆ ಸಂಚರಿಸಲಿದೆ ಎಂದು ಜಿ.ಪಂ ಸಿಇಓ ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷ ಸುರೇಶ್ ಬಿ.ಇಟ್ನಾಳ್ ತಿಳಿಸಿದ್ದಾರೆ.