ಸಾದರ ಲಿಂಗಾಯತ ಸಮಾಜದ ವಿದ್ಯಾರ್ಥಿಗಳಿಗೆ ನೆರವು

ದಾವಣಗೆರೆ, ಮಾ. 25- 2023-24 ನೇ ಸಾಲಿನ ಪ್ರಥಮ ವರ್ಷದ ವೈದ್ಯಕೀಯ ವಿದ್ಯಾಭ್ಯಾಸಿಗಳಾಗಿದ್ದು, ಸರ್ಕಾರಿ ಕೋಟಾದಲ್ಲಿ ಸ್ಥಾನಗಳಿಸಿ ವಿದ್ಯಾಭ್ಯಾಸ ಮಾಡುತ್ತಿರುವ ಕರ್ನಾಟಕ ರಾಜ್ಯ ಮಟ್ಟದ ಸಾಧು ಲಿಂಗಾಯತ ಸಮಾಜದ, ಆರ್ಥಿಕ ಸಂಕಷ್ಟದಲ್ಲಿರುವ ವಿದ್ಯಾರ್ಥಿಗಳಿಗೆ ಐದು ವರ್ಷದ ಅಧ್ಯಯನದ ಅವಧಿಗೆ ಆರ್ಥಿಕ ನೆರವು ನೀಡಲು ಸಾದರ ನೌಕರರ ಬಳಗ ಮುಂದಾಗಿದೆ.

ಸಂಬಂಧಪಟ್ಟ ಸಾಧು ಲಿಂಗಾಯತ ಸಮಾಜದ ವಿದ್ಯಾರ್ಥಿಗಳ ಏ. 5 ರೊಳಗಾಗಿ ಅಗತ್ಯ ದಾಖಲೆಗಳೊಂದಿಗೆ (ದ್ವಿತೀಯ ಪಿಯುಸಿ ಅಂಕಪಟ್ಟಿ, ಆಧಾರ ಕಾರ್ಡ್, ವೈದ್ಯಕೀಯ ಕಾಲೇಜಿನ ದಾಖಲಾತಿ ಮತ್ತು ನೀಟ್ ರ್ಯಾಂಕ್ ಜೆರಾಕ್ಸ್ ಪ್ರತಿಗಳು, ಊರಿನ ಇಬ್ಬರು ಪ್ರಮುಖ ವ್ಯಕ್ತಿಗಳ ಮೊಬೈಲ್ ನಂಬರ್ ಮತ್ತು ವಿಳಾಸವನ್ನು ನಮೂದು ಮಾಡಿ ಕೆ. ನಾಗಪ್ಪ, ಅಧ್ಯಕ್ಷರು, ಸಾದರ ನೌಕರರ ಬಳಗ, ಸಾದರ ಪತ್ತಿನ ಸಹಕಾರ ಬ್ಯಾಂಕ್, 2 ನೇ ಮಹಡಿ, ಡೋರ್ ನಂ. 2000/ೈಎ-28, 16 ನೇ ತಿರುವು, ತರಳಬಾಳು ಬಡಾವಣೆ-ವಿದ್ಯಾನಗರ ಮುಖ್ಯ ರಸ್ತೆ, ದಾವಣಗೆರೆ ಇವರನ್ನು ಸಂಪರ್ಕಿಸಲು ಕೋರಲಾಗಿದೆ.

ಹೆಚ್ಚಿನ ಮಾಹಿತಿಗಾಗಿ 7829043544, 9844501366, 9886339984,9844369744 ಗೆ ಕರೆ ಮಾಡಿ ಮಾಹಿತಿ ಪಡೆಯಬಹುದು.

error: Content is protected !!