ದೊಣೆಹಳ್ಳಿಯಲ್ಲಿ ಇಂದು ಸರ್ವ ಶರಣರ `ಬಹುತ್ವ’ ಸಮಾವೇಶ

ಜಗಳೂರು ತಾಲ್ಲೂಕಿನ ದೊಣೆಹಳ್ಳಿ ಶ್ರೀ ಶರಣ ಬಸವೇಶ್ವರ ದಾಸೋಹ ಮಠದಲ್ಲಿ ದಾಸೋಹ ಸಂಸ್ಕೃತಿ ಉತ್ಸವದ ಅಂಗವಾಗಿ ಇಂದು ಬೆಳಿಗ್ಗೆ 10.30 ಕ್ಕೆ ಸರ್ವ ಶರಣರ`ಬಹುತ್ವ’ ಸಮಾವೇಶ ಹಮ್ಮಿಕೊಳ್ಳಲಾಗಿದೆ.

ಇಳಕಲ್ ಶ್ರೀ ಗುರು ಮಹಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಬೆಂಗಳೂರಿನ ಶ್ರೀ ಮಲ್ಲಿಕಾರ್ಜುನ ದೇವರು ಅಧ್ಯಕ್ಷತೆ ವಹಿಸಲಿದ್ದು, ಚಿತ್ರದುರ್ಗದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಕೂಡ್ಲಿಗಿ ಶ್ರೀ ಪ್ರಶಾಂತ ಸಾಗರ ಶಿವಾಚಾರ್ಯ ಸ್ವಾಮೀಜಿ, ಪ್ರಾಚಾರ್ಯ ಡಾ. ದಾದಾಪೀರ್ ನವಿಲೇಹಾಳ್, ಮಾಜಿ ಶಾಸಕರಾದ  ಜಿ.ಹೆಚ್. ತಿಪ್ಪಾರೆಡ್ಡಿ, ಎಸ್.ಕೆ. ಬಸವರಾಜನ್, ಹೆಚ್.ಪಿ. ರಾಜೇಶ್, ಗಣಿ ಮಾಲಿಕ ಕೆ.ಎಸ್. ವಿನಾಯಕ, ಸರ್ವಮಂಗಳಮ್ಮ ಲಿಂ.ಹೆಚ್.ವಿ. ನಾಗೇಂದ್ರಪ್ಪ, ಶಾಂತಕುಮಾರಿ ಶಶಿಧರ್, ಎಂ.ಟಿ. ಮಲ್ಲಿಕಾರ್ಜುನಸ್ವಾಮಿ, ಐ.ಎಂ. ಓಂಕಾರಮ್ಮ, ಶ. ಮಂಜುನಾಥ್, ಫಾ. ಸಿಲ್ವೆಸ್ಟರ್ ಸಿರೇರಾ ಭಾಗವಹಿಸಲಿದ್ದಾರೆ. 

error: Content is protected !!