ಅಪ್ರಾಪ್ತ ಮಗನ ಮೇಲೆ ಹಲ್ಲೆ ಮಾಡಿದ ತಂದೆಗೆ ಶಿಕ್ಷೆ

ದಾವಣಗೆರೆ, ಮಾ. 28- ತನ್ನ ಅಪ್ರಾಪ್ತ ಮಗನಿಗೆ ಕಬ್ಬಿಣದ ಪೈಪ್‌ನಿಂದ ಮಾರಣಾಂತಿಕ ಹಲ್ಲೆ ಮಾಡಿದ ಆರೋಪಿ ಅನಿಲ್ ಕುಮಾರ್ (45)ಗೆ ಇಲ್ಲಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 5 ಸಾವಿರ ರೂ. ದಂಡ ತಪ್ಪಿದಲ್ಲಿ 3 ತಿಂಗಳು ಕಾರಾಗೃಹ ಶಿಕ್ಷೆ ವಿಧಿಸಿದೆ.

ತನ್ನ ಮಗ ಮಾತು ಕೇಳದೆ ಹೊರಗಡೆ ಸುತ್ತಾಡುತ್ತಾನೆ ಎಂದು ಆರೋಪಿ ಮಂಜುನಾಥ್ ತನ್ನ ಅಪ್ರಾಪ್ತ ಮಗನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ. ಈ ಕುರಿತು ನ್ಯಾಮತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆರೋಪ ಸಾಬೀತಾದ್ದರಿಂದ ಹಾಗೂ ಈಗಾಗಲೇ ಆರೋಪಿ 2 ವರ್ಷ 8 ತಿಂಗಳು ಕಾರಾಗೃಹ ಬಂಧನದಲ್ಲಿದ್ದರಿಂದ, ನ್ಯಾಯಾಧೀಶರಾದ ರಾಜೇಶ್ವರಿ ಎನ್. ಹೆಗಡೆ ಅವರು ಆರೋಪಿಗೆ 5 ಸಾವಿರ ರೂ. ದಂಡ ವಿಧಿಸಿದ್ದು, ಸಂತ್ರಸ್ತ ಬಾಲಕನಿಗೆ ಸರ್ಕಾರದಿಂದ 1 ಲಕ್ಷ ರೂ. ಪರಿಹಾರ ನೀಡುವಂತೆ ಆದೇಶಿಸಿ ದ್ದಾರೆ. ಪಿರ್ಯಾದಿ ಪರ ಸರ್ಕಾರಿ ವಕೀಲ ಮಂಜುನಾಥ ಬಿ. ವಾದ ಮಂಡಿಸಿದ್ದರು.

error: Content is protected !!