ಸಾಣೇಹಳ್ಳಿ, ಮಾ.25- ಶಿವಕುಮಾರ ಕಲಾಸಂಘ ಮತ್ತು ಪ್ರಸಿದ್ಧ ಫೌಂಡೇಷನ್ ಇವರ ಸಂಯುಕ್ತಾಶ್ರಯದಲ್ಲಿ ಇದೇ ದಿನಾಂಕ 28ರ ಗುರುವಾರ ಸಂಜೆ 6.30ಕ್ಕೆ ಎಸ್ಎಸ್ ರಂಗಮಂದಿರದಲ್ಲಿ `ಮಹಾತ್ಮ ರೊಂದಿಗೆ ನಡೆ `ಸತ್ಯ ಒಂದೇ’ ಶಾಸ್ತ್ರೀಯ ನೃತ್ಯ ಪ್ರದರ್ಶನ’ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಶಾಸ್ತ್ರೀಯ ನೃತ್ಯಗಾರ್ತಿ ಪ್ರತಿಭಾ ಪ್ರಹ್ಲಾದ್, ರಂಗಸಂಘಟಕ ಶ್ರೀನಿವಾಸ ಜಿ. ಕಪ್ಪಣ್ಣ, ಹಾಗೂ ಶ್ರೀ ಶಿವಕುಮಾರ ರಂಗ ಪ್ರಯೋಗ ಶಾಲೆಯ ಪ್ರಾಚಾರ್ಯ ನಟರಾಜ್ ಹೊನ್ನವಳ್ಳಿ ಭಾಗವಹಿಸುವರು.