ಹರಿಹರದಲ್ಲಿ ಇಂದು ಪಂಚ ಮಹಾಯಜ್ಞ

ಅಖಿಲ ಭಾರತೀಯ ಸಂತ ಸಮಿತಿ, ಹರಿಹರ ಇವರ ಆಶ್ರಯದಲ್ಲಿ ಲೋಕ ಕಲ್ಯಾಣಾರ್ಥ ಮಹಾ ಚಂಡಿಕಾ ಹೋಮ ಸಮೇತ ಶ್ರೀ ಚಕ್ರ ನವಾವರಣ ಹೋಮ, ಗಣಹೋಮ, ಮಹಾರುದ್ರ ಹೋಮ, ಶ್ರೀ ರಾಮತಾರಕ ಹೋಮ ಕಾರ್ಯಕ್ರಮ ಇಂದು ಬೆಳಿಗ್ಗೆ 6 ಗಂಟೆಯಿಂದ ಹರಿಹರದ ಅಮರಾವತಿ ಕಾಲೋನಿಯಲ್ಲಿರುವ ತ್ರಿಸಂಗ ಓಂ ಸಾಯಿ ಬಸವ ಮಂದಿರದ ಆವರಣದಲ್ಲಿ ನಡೆಯಲಿದೆ. 

ಅಧ್ಯಕ್ಷತೆಯನ್ನು ಅಖಿಲ ಭಾರತೀಯ ಸಂತ ಸಮಿತಿ ಕರ್ನಾಟಕ ಪ್ರಾಂತ್ಯ ಅಧ್ಯಕ್ಷರಾದ ಮಹಾಮಂಡಲೇಶ್ವರ ಓಂ ಶ್ರೀ ವಿದ್ಯಾನಂದ ಸರಸ್ವತಿ ಗುರೂಜೀ ವಹಿಸುವರು. ಅ.ಭಾ.ಸಂ.ಸಮಿತಿಯ ಪ್ರಾಂತ ಸಹ ಅಧ್ಯಕ್ಷರಾದ ಓಂ ಶ್ರೀ ಮಾತಾ ಶಿವಜ್ಞಾನಮಯಿ ಸರಸ್ವತಿ ಅವರು ಸಹ ಅಧ್ಯಕ್ಷತೆ ವಹಿಸುವರು. ಧರ್ಮ ಸಭೆಯ ದಿವ್ಯ ಸಾನ್ನಿಧ್ಯವನ್ನು ಆವರಗೊಳ್ಳದ ಶ್ರೀ ಓಂಕಾರ ಶಿವಾಚಾರ್ಯ ಮಹಾಸ್ವಾಮೀಜಿ ವಹಿಸುವರು ಹಾಗೂ ಹಿಂ.ರಾ.ಸೇನೆಯ ಹಿಂದೂ ಪ್ರವರ್ತಕರಾದ ಸಂದೀಪ್‌ ಗುರೂಜಿ ವಹಿಸುವರು.

ಕಾರ್ಯಕ್ರಮವನ್ನು ಶಾಸಕ ಬಿ.ಪಿ. ಹರೀಶ್‌ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಅಮರಾವತಿ  ಪರಮೇಶ ಗೌಡ್ರು ವಹಿಸುವರು. ವಿಶೇಷ ಆಹ್ವಾನಿತರಾಗಿ ಎಸ್‌. ರಾಮಪ್ಪ, ಹೆಚ್‌.ಎಸ್‌. ಶಿವಶಂಕರ್‌, ಶ್ರೀನಿವಾಸ ನಂದಿಗಾವಿ, ಚಂದ್ರಶೇಖರ ಪೂಜಾರ್‌, ಡಾ. ರವಿಕುಮಾರ್‌, ಜಿ.ಬಿ. ವಿನಯ್‌ಕುಮಾರ್‌, ಕೆ.ಬಿ. ಕೊಟ್ರೇಶ್‌, ಬಸವರಾಜ ಐಗೂರು, ಗುರುಬಸವರಾಜ್‌, ದೇವಾನಂದ ಎಸ್‌. ಅವರುಗಳು ವಿಶೇಷ ಆಹ್ವಾನಿತರಾಗಿ ಆಗಮಿಸುವರು.

error: Content is protected !!