ತೂಲಹಳ್ಳಿಯಲ್ಲಿ ಸಂಭ್ರಮದ ಶ್ರೀರಾಮನ ಮೆರವಣಿಗೆ

ತೂಲಹಳ್ಳಿಯಲ್ಲಿ ಸಂಭ್ರಮದ ಶ್ರೀರಾಮನ ಮೆರವಣಿಗೆ

ಕೊಟ್ಟೂರು, ಜ. 22 – ಉಜ್ಜಿನಿ ಸಮೀಪದ ತೂಲಹಳ್ಳಿಯಲ್ಲಿ ಶ್ರೀರಾಮ ಮಂದಿರದ ಉದ್ಘಾಟನೆ ಹಾಗು ಅಯೋಧ್ಯೆಯ ಶ್ರೀರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಯ ಪ್ರಯುಕ್ತ ಶ್ರೀ ಆಂಜನೇಯ ಸ್ವಾಮಿಯ ದೇವಸ್ಥಾನದಿಂದ ಜ್ಯೋತಿ ಬೆಳಗಿಸುವುದರ ಮೂಲಕ ಶ್ರೀ ರಾಮನ ಮೆರವಣಿಗೆಯನ್ನು ಮಾಡಲಾಯಿತು. ಆಂಜನೇಯ ದೇವಸ್ಥಾನದ ಹತ್ತಿರ ಪ್ರಸಾದದ ವ್ಯವಸ್ಥೆ ಮಾಡಿಲಾಗಿತ್ತು. ಈ ಸಂದರ್ಭದಲ್ಲಿ ಬಸವರಾಜ್ ಎ.ಎಸ್., ಮರುಳಸಿದ್ದನಗೌಡ್ರು, ಬಸವನಗೌಡ್ರು, ಮೆಡಿಕಲ್ ಬಾಬುರಾವ್,  ದಿದ್ದಿಗಿ ರಾಜಣ್ಣ, ಮರುಳಸಿದ್ದಯ್ಯ, ಮಹೇಶ್, ಅಂಜಿನಪ್ಪ, ಸ್ವಾಮಿ ಸಂತೋಷ, ಬಿ.ಪಿ. ಕೆಂಚಪ್ಪ, ಹನುಮಂತಪ್ಪ, ಅಂಜಿನಪ್ಪ ಎಂ.,  ಮತ್ತು ಇತರರು ಕಾರ್ಯಕ್ರಮ ನಡೆಸಿದರು.

error: Content is protected !!