ಬುಲೇರೋ ವಾಹನ ಪಲ್ಟಿ : 3 ಸಾವು

ನ್ಯಾಮತಿ, ಜ. 15- ಹಸು ಅಡ್ಡಬಂದ ಪರಿಣಾಮ ಬುಲೇರೋ ವಾಹನ ಪಲ್ಟಿಯಾಗಿ ಕ್ಯಾಬಿನ್‌ನಲ್ಲಿದ್ದ ಮೂರು ಮಂದಿಗೆ ತೀವ್ರ ಗಾಯಗೊಂಡು ಆಸ್ಪತ್ರೆಗೆ ದಾಖಲಿಸಿದ ನಂತರ ಮೃತಪಟ್ಟ ಘಟನೆ ತಾಲ್ಲೂಕಿನ ಚಿನ್ನಿಕಟ್ಟೆ ಬಳಿ ನಡೆದಿದೆ. ಅಡಿಕೆ ಕೆಡವಿಕೊಂಡು ಬುಲೇರೋ ವಾಹನದಲ್ಲಿ ಲೋಡ್‌ ಮಾಡಿದ ಅಡಿಕೆ ಮೇಲೆ ಭತ್ತದ ಹುಲ್ಲಿನ ಪೆಂಡಿಯನ್ನು ಇಟ್ಟುಕೊಂಡು ತಮ್ಮ ಗ್ರಾಮಕ್ಕೆ ಮರಳಿ ಬರುವಾಗ ಪಲ್ಟಿಯಾಗಿ ಗಾಯಗೊಂಡ ಮೂವರು ಕೂಲಿ ಕಾರ್ಮಿಕರು ಮೃತಪಟ್ಟಿದ್ದಾರೆ. ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಮಂಜುನಾಥ್, ನಾಗರಾಜ್, ಗೌತಮ್ ಮೃತಪಟ್ಟಿದ್ದಾರೆ. ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿಜಯಪ್ಪ, ಗಣೇಶ್, ಸುರೇಶ್ ಗಾಯಗಳಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

error: Content is protected !!