‘ನನ್ನ ಭಾರತ, ವಿಕಸಿತ ಭಾರತ’ ಭಾಷಣ ಸ್ಪರ್ಧೆ

ದಾವಣಗೆರೆ, ಜ.6- ನೆಹರು ಯುವ ಕೇಂದ್ರದಿಂದ ‘ನನ್ನ ಭಾರತ-ವಿಕಸಿತ್ ಭಾರತ – 2047’ ವಿಷಯದ ಕುರಿತು ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆಯನ್ನು ಇದೇ ದಿನಾಂಕ 11 ರ ಗುರುವಾರ ಬೆಳಿಗ್ಗೆ 10 ಗಂಟೆಗೆ ನಗರದ ಬಿ.ಎಸ್.ಚನ್ನಬಸಪ್ಪ ಮಹಾವಿದ್ಯಾಲಯದಲ್ಲಿ ಏರ್ಪಡಿಸಲಾಗಿದೆ.

ಸ್ಪರ್ಧೆಯಲ್ಲಿ ಭಾಗವಹಿಸುವರು 15 ರಿಂದ 29 ವರ್ಷ ವಯೋಮಾನ ದೊಳಗಿರಬೇಕು. ಇದೇ ದಿನಾಂಕ 10 ರೊಳಗೆ  ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಮೊ.ನಂ 9901863789 ಸಂಪರ್ಕಿಸಲು ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ಭುಕ್ಯಾ ಸಂಜೀವ್‌ ತಿಳಿಸಿದ್ದಾರೆ.

error: Content is protected !!