ಬರಗಾಲ: ತರಳಬಾಳು ಹುಣ್ಣಿಮೆ ಮುಂದೂಡಿಕೆ

ಬರಗಾಲ: ತರಳಬಾಳು  ಹುಣ್ಣಿಮೆ ಮುಂದೂಡಿಕೆ

ಭರಮಸಾಗರ, ಡಿ.28- ಫೆಬ್ರವರಿ 16 ರಿಂದ 24 ರ ವರೆಗೆ ಭರಮಸಾಗರದಲ್ಲಿ ನಡೆಯ ಬೇಕಾಗಿದ್ದ ತರಳ ಬಾಳು ಹುಣ್ಣಿಮೆ ಮಹೋತ್ಸ ವವನ್ನು ಮುಂದೂಡಲಾಗಿದೆ. ಮುಂದಿನ ವರ್ಷ ಮಹೋತ್ಸವವನ್ನು ಭರಮಸಾಗರದಲ್ಲೇ ನಡೆಸ ಲಾಗುವುದು ಎಂದು ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಭರಮಸಾಗರ ಏತ ನೀರಾವರಿ ಯೋಜನೆಯ ಭರಮಣ್ಣನಾಯಕನ ಕೆರೆ ವೀಕ್ಷಣೆ ಮಾಡಿದ ನಂತರ ಏರ್ಪಡಿಸಲಾಗಿದ್ದ ಸಾರ್ವಜನಿಕ ಸಭೆಯಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ರಾಜ್ಯದಲ್ಲಿ ಭೀಕರ ಬರಗಾಲದ ಬವಣೆ ಇದೆ. ಜನರು ಸಂಕಷ್ಟದಲ್ಲಿದ್ದಾರೆ. ಜನರು ಕಷ್ಟದಲ್ಲಿರುವಾಗ ವಿಜೃಂಭಣೆಯ ಮಹೋತ್ಸವ ಮಾಡುವುದು ಸರಿಯಲ್ಲ ಎಂದರು.
ಭರಮಸಾಗರದಲ್ಲಿ ನಡೆಯಬೇಕಾಗಿದ್ದ ಅದ್ಧೂರಿ ಆಚರಣೆಯನ್ನು ಮುಂದೂಡಿ, ಈ ಬಾರಿ ಸಿರಿಗೆರೆಯ ಮಠದಲ್ಲಿಯೇ ಸರಳವಾಗಿ, ಸಾಂಪ್ರದಾಯಿಕವಾಗಿ ಆಚರಿಸಲಾಗುವುದೆಂದು ಪ್ರಕಟಿಸಿದರು.‌

error: Content is protected !!