ಕಣ್ಮನ ಸೆಳೆದ ಶಿಲಾಬಾಲಿಕೆ ಛದ್ಮವೇಷ

ಕಣ್ಮನ ಸೆಳೆದ ಶಿಲಾಬಾಲಿಕೆ ಛದ್ಮವೇಷ

ದಾವಣಗೆರೆ, ನ.17-  ತಾಲ್ಲೂಕಿನ ಶ್ಯಾಗಲೆಯ ಕುವೆಂಪು ಪ್ರೌಢ ಶಾಲೆಯಲ್ಲಿ   ನಡೆದ ಕಂದಗಲ್‌ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಬೇಲೂರು ಶಿಲಾಬಾಲಿಕೆ  ಛದ್ಮವೇಷ ಧರಿಸಿದ್ದ ಬಾಲಕಿ ಕವಿತಾ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದಳು. 

ಕೈಯಲ್ಲಿ ವೀಣೆ ಹಿಡಿದು, ಕೊರಳಲ್ಲಿ ಉದ್ದದ ಸರಮಾಲೆ ತೊಟ್ಟು, ತಲೆ ಮೇಲೆ ಕಿರೀಟ ಧರಿಸಿ, ಬೇಲೂರ ವೀಣಾ ಪಾಣಿ ಛದ್ಮ ವೇಷದಲ್ಲಿ ವೇದಿಕೆ ಮೇಲೆ ನಿಂತಿದ್ದ,  ಮಳಲಕೆರೆ ಸರ್ಕಾರಿ ಪ್ರೌಢಶಾಲೆ 10ನೇ ತರಗತಿ  ವಿದ್ಯಾ ರ್ಥಿನಿ ಬಿ.ಎಸ್. ಕವಿತಾ  ಕಲಾವಂತಿಕೆಗೆ   ಪ್ರೇಕ್ಷಕರು ಅಚ್ಚರಿಗೊಂಡರು.  ​ಸದ್ಯ, ಈ ಬಾಲಕಿ ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.

error: Content is protected !!