ನಗರದಲ್ಲಿ ಇಂದು ಶಿವಗೋಷ್ಠಿ – ಸ್ಮರಣೆ

ಶಿವಗೋಷ್ಠಿ ಸಮಿತಿ, ಶ್ರೀ ಶಿವಕುಮಾರಸ್ವಾಮಿ ಮಹಾಮಂಟಪ ಹಾಗೂ ಸಾದರ ನೌಕರರ ಬಳಗ ಇವರುಗಳ ಸಂಯುಕ್ತಾಶ್ರಯದಲ್ಲಿ ಶಿವಗೋಷ್ಠಿ-301 ಹಾಗೂ ಸ್ಮರಣೆ-73 ಮಾಸಿಕ ಕಾರ್ಯಕ್ರಮವು ತರಳಬಾಳು ಬಡಾವಣೆಯ ಶ್ರೀ ಶಿವಕುಮಾರಸ್ವಾಮಿ ಮಹಾಮಂಟಪದಲ್ಲಿ ಇಂದು ಸಂಜೆ 6.30 ಕ್ಕೆ ನಡೆಯಲಿದೆ.

ಅಧ್ಯಕ್ಷತೆಯನ್ನು ಎಂ.ಬಿ. ಸಂಗಮೇಶ್ವರಗೌಡ್ರು ವಹಿಸುವರು. `ವಚನಗಳಲ್ಲಿ ವೈಚಾರಿಕತೆ ಹಾಗೂ ವೈಜ್ಞಾನಿಕತೆ’ ವಿಷಯ ಕುರಿತು ಶ್ರೀಮತಿ ಅನ್ನಪೂರ್ಣ ಪಾಟೀಲ್‌ ಅವರಿಂದ ಉಪನ್ಯಾಸ ನಡೆಯುವುದು. 

ಲಿಂ. ಶರಣ ಜಿ.ಎಸ್‌. ವಿಜಯ ಕುಮಾರ್‌, ಬ್ಯಾಲಹಾಳ್‌ (ಚಿತ್ರದುರ್ಗ ಜಿ.) ಇವರ ಸ್ಮರಣೆಯನ್ನು ಜಿ.ಎಸ್‌. ಜಯಕುಮಾರ್‌ ನಡೆಸಿಕೊಡುವರು.   ಕದಳಿ ಮಹಿಳಾ ವೇದಿಕೆಯಿಂದ ವಚನ ಗಾಯನ ನಡೆಯುವುದು. 

error: Content is protected !!