ಮದ್ಯಪಾನ ವಿರೋಧಿ ಗುರುಗಳ ಭೇಟಿಗೆ ಏನು ವಿಶೇಷ ?

ಮದ್ಯಪಾನ ವಿರೋಧಿ ಗುರುಗಳ ಭೇಟಿಗೆ ಏನು ವಿಶೇಷ ?

ಅಬಕಾರಿ ಸಚಿವರನ್ನು ಪ್ರಶ್ನಿಸಿದ ಸಾಣೇಹಳ್ಳಿ ಸ್ವಾಮೀಜಿ

ಸಾಣೇಹಳ್ಳಿ, ಅ. 16- ಸದ್ಯದ ಆರ್ಥಿಕ  ಪರಿಸ್ಥಿತಿಯನ್ನು ಅವಲೋಕಿಸಿ ನೋಡಿದಾಗ ಮದ್ಯಪಾನ ನಿಷೇಧ ಕಷ್ಟಸಾಧ್ಯ. ಮದ್ಯಪಾನ ಕೇವಲ ರಾಜ್ಯ ಸರ್ಕಾರ ನಿಲ್ಲಿಸಿದರೆ, ಇಡೀ ದೇಶ ನಿಲ್ಲಿಸಿದಂತೆ ಆಗುವುದಿಲ್ಲ. ಜನರಲ್ಲಿ ಜಾಗೃತಿ ಅವಶ್ಯ ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಹೇಳಿದರು.

ಹೊಸದುರ್ಗ ತಾಲ್ಲೂಕು ಸಾಣೇಹಳ್ಳಿಗೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದ ಸಂದರ್ಭದಲ್ಲಿ ಅವರು ಮಾತನಾಡಿದರು.

ಕೇಂದ್ರ ಸರ್ಕಾರ ಕೂಡ ಮದ್ಯ ನಿಷೇಧದ ಬಗ್ಗೆ ತೀರ್ಮಾನ ಕೈಗೊಂಡರೆ ಸಮಸ್ಯೆ ಬಗೆಹರಿಯಬಹುದು. ಸಮಾಜ ಅಭಿವೃದ್ಧಿ ಹೊಂದಿ, ಸುಸ್ಥಿತಿಯಲ್ಲಿರಬೇಕೆಂಬುದೇ ನಮ್ಮ ಅಭಿನಾಶೆ ಎಂದು ಹೇಳಿದರು.

ಯಾವಾಗಲೂ ಮದ್ಯಪಾನ ವಿರೋಧಿಸುತ್ತಲೇ ಬಂದವರು. ಒಂದು ಸಾವಿರ ಮದ್ಯದಂಗಡಿ ತೆರೆಯಬೇಕೆಂದಾಗ ಇಡೀ ಕರ್ನಾಟಕದಲ್ಲಿ ಮೊಟ್ಟ ಮೊದಲು ವಿರೋಧ ಮಾಡಿದವರು ನಾವು. ಆದರೆ ವಿರೋಧ ಮಾಡಿದಂತಹ ಗುರುಗಳನ್ನೇ ಭೇಟಿಯಾಗಲು ಬಂದ್ದೀದ್ದೀರಿ. ಏನು ವಿಶೇಷ ಎಂದು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಪ್ರಶ್ನಿಸಿದರು. ಇಲ್ಲಾ ಸ್ವಾಮೀಜಿ ಇದೊಂದು ಸೌಹಾರ್ಧಯುತ ಭೇಟಿ ಎಂದು ಹೇಳಿದರು.

error: Content is protected !!