ಕದಳಿ ವೇದಿಕೆಯಿಂದ ಇಂದು 145ನೇ ಕಮ್ಮಟದಲ್ಲಿ ದತ್ತಿ ಉಪನ್ಯಾಸ

ಕದಳಿ ಮಹಿಳಾ ವೇದಿಕೆಯ ಜಿಲ್ಲಾ ಘಟಕದಿಂದ 145ನೇ ಕಮ್ಮಟದಲ್ಲಿ ದತ್ತಿ ಉಪನ್ಯಾಸ, ಪರಿಸರ ದಿನಾಚರಣೆ, ಅಂಬಿಗರ ಚೌಡಯ್ಯ ಹಾಗೂ ಕುಂಬಾರ ಗುಂಡಯ್ಯನವರ ಉತ್ಸವ ಕಾರ್ಯಕ್ರಮವು ಇಂದು ಮಧ್ಯಾಹ್ನ 3 ಗಂಟೆಗೆ  ಆಂಜನೇಯ ಬಡಾವಣೆಯ ಯೋಗ ಹಾಲ್ ನಲ್ಲಿ ನಡೆಯಲಿದೆ. 

ಕದಳಿ ಮಹಿಳಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ವಿನೋದ ಅಜಗಣ್ಣನವರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಮಹಾನಗರ ಪಾಲಿಕೆ ಮಾಜಿ ಮಹಾಪೌರರಾದ ಎಸ್.ಟಿ. ವೀರೇಶ್ ಉಪಸ್ಥಿತರಿರುವರು.

ಭೀಮಸಮುದ್ರ ಲಿಂ. ಹಾಲಮ್ಮ ಜಿ.ಎಂ. ಮಲ್ಲಿಕಾರ್ಜುನ ದತ್ತಿ (ದಾನಿ –  ಜಿ.ಎಂ. ಪ್ರಸನ್ನಕುಮಾರ್ ಸಹೋದರರು, ಭೀಮಸಮುದ್ರ), ಲಿಂ. ಡಾ. ಶಶಿಕಲಾ ದತ್ತಿ (ದಾನಿ – ಶ್ರೀಮತಿ ಗಿರಿಜಮ್ಮ ಸೋಮಶೇಖರಗೌಡ), ಲಿಂ. ಮಾಗನೂರು ರಾಜಶೇಖರಗೌಡ ದತ್ತಿ (ದಾನಿ- ಶ್ರೀಮತಿ ಸುಲೋಚನಾ ರಾಜಶೇಖರಗೌಡ) ದತ್ತಿ ದಾನಿಗಳಾಗಿದ್ದಾರೆ. 

ಕಾರ್ಯಕ್ರಮದಲ್ಲಿ ಸ್ತ್ರೀರೋಗ ತಜ್ಞರಾದ ಡಾ. ಶಾಂತಾಭಟ್ ಅವರು ಈಳೆ ನಿಂಬೆ ಮಾದಲ ಮಾವಿನ ಮರಕೆ ಹುಳಿ ನೀರನೆರೆದವರಾರಯ್ಯ ವಿಷಯದ ಬಗ್ಗೆ ಉಪನ್ಯಾಸ ನೀಡಲಿದ್ದಾರೆ. ಬಯೋ ಎಂಜೈಮ್ ತಯಾರಿಕೆಯ ಪ್ರಾತ್ಯಕ್ಷಿಕೆ ಕಾರ್ಯಕ್ರಮ ನಡೆಯಲಿದೆ.

error: Content is protected !!