ದಾವಣಗೆರೆ, ಜೂ. 6- ಕುರಿ ಗುಡಾರದಲ್ಲಿದ್ದ 2.25 ಲಕ್ಷ ರೂಪಾಯಿ ಹಾಗೂ 3 ತೊಲ ಬಂಗಾರದ ಒಡವೆ, ಲೆಕ್ಕದ ಪುಸ್ತಕ, ಇನ್ಶ್ಯೂರೆನ್ಸ್ ಪ್ರತಿಗಳು ಕಳ್ಳತನವಾಗಿರುವುದಾಗಿ ಬಸವಾಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ತ್ಯಾವಣಿಗೆ ಗ್ರಾಮದ ಹಾಲೇಶ್ ಅವರ ಹೊಲದಲ್ಲಿ ನಾವು ಕುರಿಗಳನ್ನು ಗಾಡಾರ ಹಾಕಿಕೊಂಡು ವಾಸವಾಗಿದ್ದು, ಮೇ 26ರಂದು ಮಧ್ಯಾಹ್ನ ಯಾರೋ ಅಪರಿಚಿತ ವ್ಯಕ್ತಿ ಪಕ್ಕದ ಹೊಲದವರು ಎಂದು ಹೇಳಿ ನೀರು ಕುಡಿದು ಅಲ್ಲಿದ್ದ ಹುಡುಗ ಸೊಪ್ಪು ತೆಗೆದುಕೊಂಡು ಬರುವಷ್ಟರಲ್ಲಿ ಗುಡಾರದಲ್ಲಿದ್ದ ಆಭರಣ, ಹಣ, ಪತ್ರಗಳನ್ನು ತೆಗೆದುಕೊಂಡು ಹೋಗಿದ್ದಾನೆ ಎಂದು ರಾಮಪ್ಪ ಎಂಬುವವರು ದೂರು ನೀಡಿದ್ದಾರೆ.
May 18, 2024