ಸಪ್ತಗಿರಿ ವಿದ್ಯಾಲಯದಲ್ಲಿ ಪಾದಪೂಜೆ

ದಾವಣಗೆರೆ, ಫೆ. 17- ನಗರದ ಕುಂದುವಾಡ ರಸ್ತೆಯಲ್ಲಿನ ಚಿಗಟೇರಿ ಲೇ ಔಟ್ ನ ಸಪ್ತಗಿರಿ ವಿದ್ಯಾಲಯದಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಂದ  ಪಾಲಕ-ಪೋಷಕರಿಗೆ ಪಾದಪೂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಸಪ್ತಗಿರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ. ಮಹಾಂತೇಶ ಭಾರತಿ, ಶಾಲೆಯ ಪ್ರಾಂಶುಪಾಲ ದೇವರಾಜ್, ಶಾಲೆಯ ಮುಖ್ಯೋಪಾಧ್ಯಾಯಿನಿ ಶೈಲಜ ರಮೇಶ್ ಉಪಸ್ಥಿತರಿದ್ದರು.

ಕನ್ನಡ  ಶಿಕ್ಷಕ ಹಾಲಸ್ವಾಮಿ ನಿರೂಪಿಸಿದರು. ವಿದ್ಯಾರ್ಥಿಗಳಾದ ಕಾಂಚನ ತಂಡದವರು ಪ್ರಾರ್ಥಿಸಿದರು. ಆಂಗ್ಲ ಭಾಷಾ ಶಿಕ್ಷಕ ಯಶವಂತ ಸ್ವಾಗತಿಸಿದರು. ಗಣಿತ ಶಿಕ್ಷಕ ತ್ರಿಗುಣ್ ವಂದಿಸಿದರು.

error: Content is protected !!