ಹರಿಹರ, ಮಾ. 5 – ಒಳ ಮೀಸಲಾತಿಗೆ ಒತ್ತಾಯಿಸಿ ಹರಿಹರದ ಪ್ರೊ. ಬಿ. ಕೃಷ್ಣಪ್ಪನವರ ಸಮಾಧಿ ಸ್ಥಳದಿಂದ ಬೆಂಗಳೂರಿನವರೆಗೂ, ಪಾದಯಾತ್ರೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಮುಖಂಡರು ಮಾತನಾಡಿ ಒಳ ಮೀಸಲಾತಿ ಜಾರಿ ಮಾಡಿ ಇಲ್ಲವೇ ಕುರ್ಚಿ ಕಾಲಿ ಮಾಡಿ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡುವ ಉದ್ದೇಶದಿಂದ ಪಾದಯಾತ್ರೆ ಮಾಡಲಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹೋರಾಟಗಾರರಾದ ಭಾಸ್ಕರ್ ಪ್ರಸಾದ್, ಚಿತ್ರ ನಟ ಚೇತನ್, ಅಹಿಂಸ ಪ್ರೊ. ಹರಿರಾಮ್, ಪ್ರೊ. ಡಾ. ಎ.ಬಿ. ರಾಮಚಂದ್ರಪ್ಪ ನಿವೃತ್ತ ಎಸ್ಪಿ ರವಿ ನಾರಾಯಣ್, ಎಂ.ಸಿ. ಮೋಹನ್ ಕುಮಾರ್, ಎಲ್.ವಿ. ಸುರೇಶ್, ಹೆಗ್ಗೆರೆ ರಂಗಪ್ಪ, ಸಿ. ಬಸವರಾಜ್, ಬಿಎಸ್ಪಿ ಜಿಲ್ಲಾಧ್ಯಕ್ಷ ಡಿ. ಹನುಮಂತಪ್ಪ, ನಿವೃತ್ತ ಸಮಾಜ ಕಲ್ಯಾಣ ಅಧಿಕಾರಿ ಹನುಮಂತಪ್ಪ, ರಾಘವೇಂದ್ರ ಕಡೆ ಮನಿ, ಉಮೇಶ್ ರಾಣೇಬೆನ್ನೂರು, ಹೆಚ್. ಹುಲಿಗೇಶ, ಪಂಚು ಪೈಲ್ವಾನ್, ಎಸ್. ಕೇಶವ್ ಹಾಗೂ ರಾಜ್ಯದ ಹಲವಾರು ಜಿಲ್ಲೆಯ ಮುಖಂಡರು ಭಾಗವಹಿಸಿದ್ದರು.