ದಾವಣಗೆರೆ, ಅ.13- ನಾಳೆ ದಿನಾಂಕ 14 ರಿಂದ 18 ರವರೆಗೆ ಗೋವಾ ರಾಜ್ಯದ ವಾಸ್ಕೋಡಿಗಾಮಾ ದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಬೆಂಚ್ ಪ್ರೆಸ್ ಸ್ಪರ್ಧೆಗೆ ನಗರದ ಶ್ರೀ ಕನ್ನಿಕಾಪರಮೇಶ್ವರಿ ಕೋ-ಆಪ್ ಬ್ಯಾಂಕಿನ ಉದ್ಯೋಗಿ ಮತ್ತು ಶ್ರೀ ಬೀರೇಶ್ವರ ವ್ಯಾಯಾಮ ಶಾಲೆಯ ಕ್ರೀಡಾಪಟು ವಿ.ರಕ್ಷಿತ್ ಅವರು ಆಯ್ಕೆಯಾಗಿದ್ದಾರೆ. ರಕ್ಷಿತ್, ಕ್ರೀಡಾ ತರಬೇತುದಾರ ಪಿ.ವಿಶ್ವನಾಥ್ ಅವರ ಪುತ್ರ.
ಪವರ್ಲಿಫ್ಟಿಂಗ್ ಬೆಂಚ್ ಪ್ರೆಸ್ ಸ್ಪರ್ಧೆಗೆ ರಕ್ಷಿತ್ ಆಯ್ಕೆ
