ಸಾಣೇಹಳ್ಳಿ : ರಾಷ್ಟ್ರೀಯ ನಾಟಕೋತ್ಸವಕ್ಕೆ 51 ಕ್ವಿಂಟಾಲ್ ಅಕ್ಕಿ ಸಮರ್ಪಣೆ

ಸಾಣೇಹಳ್ಳಿ : ರಾಷ್ಟ್ರೀಯ ನಾಟಕೋತ್ಸವಕ್ಕೆ 51 ಕ್ವಿಂಟಾಲ್ ಅಕ್ಕಿ ಸಮರ್ಪಣೆ

ಸಾಣೇಹಳ್ಳಿ, ಸೆ. 18-  ಬರುವ ನವೆಂ ಬರ್ ತಿಂಗಳಲ್ಲಿ ನಡೆಯ ಲಿರುವ ರಾಷ್ಟ್ರಿಯ ನಾಟಕೋತ್ಸವಕ್ಕೆ ಭದ್ರಾವತಿ ತಾಲ್ಲೂಕಿನ ತರಳಬಾಳು ಯುವ ವೇದಿಕೆ ಮತ್ತು ತಾಲ್ಲೂ ಕಿನ ಸಾಧು ವೀರಶೈವ ಸಮಾಜದವರು 51 ಕ್ವಿಂಟಲ್ ಅಕ್ಕಿಯನ್ನು ಸಾಣೇಹಳ್ಳಿ ಶ್ರೀಮಠಕ್ಕೆ ಸಮರ್ಪಿಸಿ, ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಆಶೀರ್ವಾದ ಪಡೆದರು. 

ಶ್ರೀಗಳು ಮಾತನಾಡಿ, ನೀವು ಕಲೆ, ಸಾಹಿತ್ಯ, ಸಂಗೀತದ ಒಲವು ಬೆಳೆಸಿಕೊಂಡು ಸುಸಂಸ್ಕೃತ ಜೀವನ ನಡೆಸುವಂತಾಗಲಿ ಎಂದು ಹಾರೈಸಿದರು. ಕಲೆಗೆ ನೆರವು ನೀಡುವ ನಿಮ್ಮ ಸದ್ಭಾವನೆಗಳು ಹೀಗೇ ಮುಂದುವರಿದು ಇತರರಿಗೂ ಆದರ್ಶವಾಗಲಿ ಎಂದರು. 

ಈ ಸಂದರ್ಭದಲ್ಲಿ ಭದ್ರಾವತಿ ತಾಲ್ಲೂಕು ಸಾಧು ವೀರಶೈವ ಸಮಾಜದ ಅಧ್ಯಕ್ಷ ಕೆ. ಜಿ ರವಿಕುಮಾರ, ಕಾರ್ಯದರ್ಶಿ ಭರಣೇಶ್, ಸಹ ಕಾರ್ಯದರ್ಶಿ ಬಿ. ಎಸ್. ಪರಮೇಶ್ವರಪ್ಪ, ಖಜಾಂಚಿ ನವೀನ್, ಸದಸ್ಯ ರಾದ ಮಲ್ಲಿಕಾರ್ಜುನ್ ಹೆಚ್. ಈ, ವಸಂತ ಕುಮಾರ್, ನರೇಂದ್ರ, ನಾಗರಾಜ, ದಿನೇಶ್, ಕೆ.ಹೆಚ್ ರವಿಕು ಮಾರ್‌ ಕೊಮಾರನಹಳ್ಳಿ, ಶಿವಕುಮಾರ್ ಕೊಮಾರ ನಹಳ್ಳಿ, ರಾಜಕುಮಾರ, ಸತೀಶ್‍ಗೌಡ, ರುದ್ರಪ್ಪ, ಹೆಚ್. ಬಿ. ಕಿರಣ್, ಹೆಚ್. ಪಿ ನಟರಾಜ್, ಕೆ. ಜಿ ಮಹೇಶ್ವರಪ್ಪ, ಸಂಜೀವ್‍ಕುಮಾರ್ ಹೆಚ್. ಎಸ್, ತರಳಬಾಳು ಯುವ ವೇದಿಕೆಯ ಅಧ್ಯಕ್ಷ ಸಂಕೇತ ಎ. ವಿ, ಸದಸ್ಯರಾದ ವಸಂತ್, ವೀರೇಶ್ ಪಾಟೀಲ್, ಆಕಾಶ್, ವೈ. ನಾಗೇಶ್, ರಾಘವೇಂದ್ರ, ಡಿ.ಎಸ್ ಮಂಜುನಾಥ್, ಮಲ್ಲಿಕಾರ್ಜುನ್ ಹೆಚ್ ಎನ್ ಮತ್ತಿತರರಿದ್ದರು. 

error: Content is protected !!