ಡಾ. ಎಸ್ಎಸ್ಎನ್‌ಪಿಎಸ್ ಶಾಲೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ

ಡಾ. ಎಸ್ಎಸ್ಎನ್‌ಪಿಎಸ್ ಶಾಲೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ

ದಾವಣಗೆರೆ, ಆ. 29- ಡಾ. ಎಸ್. ಎಸ್. ಎನ್. ಪಿ. ಶಾಲೆಯಲ್ಲಿ ಶ್ರೀ  ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ವಿಶೇಷವಾದ ಸಭೆ ಆಯೋಜಿಸಲಾಗಿತ್ತು.

ಶಾಲೆಯ ನಾಲ್ಕು ತಂಡದವರಿಂದ (ವಿಶ್ವಾಮಿತ್ರ, ಕಶ್ಯಪ, ಗೌತಮ, ವಸಿಷ್ಟ) ಶ್ರೀ ಕೃಷ್ಣ ಜನ್ಮಾಷ್ಟಮಿಯ ಅಲಂಕಾರ ಸ್ಪರ್ಧೆಯನ್ನು ಏರ್ಪಡಿಸಲಾ ಗಿತ್ತು. ಜೊತೆಗೆ ನಾಲ್ಕು ತಂಡದವರಿಂದ ಪಿರಮಿಡ್‌ ರಚಿಸಿ ಮಡಿಕೆ ಒಡೆ ಯುವ ಕಾರ್ಯಕ್ರಮ ಜರುಗಿತು. ಇದರಲ್ಲಿ ಗೌತಮ ತಂಡವು ಜಯ ಗಳಿ ಸಿತು. ಸಭೆಯ ಉಸ್ತುವಾರಿ ವಹಿಸಿದ್ದ   ಪ್ರಾಂಶುಪಾಲರಾದ ಶ್ರೀಮತಿ ಕಮಲ ಬಿ. ನಾರಾಯಣ್ ಅವರು ಭಗವದ್ಗೀತೆಯ ಸಾರಾಂಶವನ್ನು ವಿವರಿಸಿದರು.

ಈ ಸಂದರ್ಭದಲ್ಲಿ ಬಾಪೂಜಿ ಸಂಸ್ಥೆಯ ಡೀನ್ ಮಂಜುನಾಥ ರಂಗರಾಜು,   ಉಪಪ್ರಾಂಶುಪಾಲ ರಮೇಶ್‌ ಬಾಬು, ಆಡಳಿತಾಧಿಕಾರಿ ಅಜಯ್‌ ಎಸ್., ಶಾಲಾ ಸಂಯೋಜಕರಾದ ಶ್ರೀಮತಿ ರುತಿಕಾ ಮತ್ತು ಇತರರು ಉಪಸ್ಥಿತರಿದ್ದರು.

error: Content is protected !!