ಭದ್ರಾ ಜಲಾಶಯಕ್ಕೆ ಭಾನುವಳ್ಳಿ ಗ್ರಾಮಸ್ಥರಿಂದ ವಿಶೇಷ ಪೂಜೆ

ಭದ್ರಾ ಜಲಾಶಯಕ್ಕೆ ಭಾನುವಳ್ಳಿ  ಗ್ರಾಮಸ್ಥರಿಂದ ವಿಶೇಷ ಪೂಜೆ

ಮಲೇಬೆನ್ನೂರು, ಜು. 14 – ಸಮೃದ್ಧ ಮಳೆಯಾಗಿ ಭದ್ರಾ ಜಲಾಶಯ ಶೀಘ್ರದಲ್ಲಿಯೇ ಭರ್ತಿಯಾಗಲಿ ಎಂದು ಪ್ರಾರ್ಥಿಸಿ ಭಾನುವಳ್ಳಿ ಗ್ರಾಮಸ್ಥರು ಭಾನುವಾರ ಭದ್ರಾ ಡ್ಯಾಮ್‌ಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ಅಭಿಷೇಕ ಮಾಡಿದರು. 

ಗ್ರಾಮದ ಮುಖಂಡ ಹೆಚ್.ಎಸ್. ಕರಿಯಪ್ಪ, ಬಲ್ಲೂರು ಕೆಂಚಪ್ಪ, ರೇವಣಸಿದ್ದಪ್ಪ, ಹೆಚ್.ಪಿ. ಪ್ರಶಾಂತ್, ಬಿ.ಎನ್. ಚಂದ್ರಪ್ಪ, ಗ್ರಾ.ಪಂ. ಸದಸ್ಯ ಗಂಗಾಧರ್ ಬಲ್ಲೂರ್, ಎಸ್. ಆಂಜನೇಯ, ಹೆಚ್. ನಾರಾಯಣಪ್ಪ, ನವೀನ್ ಕುಮಾರ, ರೈತ ಸಂಘದ ಅಧ್ಯಕ್ಷ ಎನ್. ಪ್ರಕಾಶ್, ಕೆ. ನಾರಾಯಣಪ್ಪ, ಗೋವಿಂದ್ ರಾಜ್, ಪೂಜಾರ್ ರೇವಣಪ್ಪ, ಹೆಚ್. ಚಂದ್ರಪ್ಪ ಮತ್ತಿತರರು ಈ ವೇಳೆ ಉಪಸ್ಥಿತರಿದ್ದರು.

error: Content is protected !!