ಆನೆಕೊಂಡ ಪ್ರಾ.ಕೃ.ಪ. ಸಹಕಾರ ಸಂಘದ ಅಧ್ಯಕ್ಷರಾಗಿ ಕೊಟ್ರಯ್ಯ ಆಯ್ಕೆ

ಆನೆಕೊಂಡ ಪ್ರಾ.ಕೃ.ಪ. ಸಹಕಾರ ಸಂಘದ ಅಧ್ಯಕ್ಷರಾಗಿ ಕೊಟ್ರಯ್ಯ ಆಯ್ಕೆ

ದಾವಣಗೆರೆ, ಜು.2- ಸಮೀಪದ ಆನೆಕೊಂಡ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಕೊಟ್ರಯ್ಯ ಬಿನ್‌ ಶರಣಯ್ಯ, ಬಸಾಪುರ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸಂಘದ ಕಾರ್ಯಾಲಯದಲ್ಲಿ ನಡೆದ ಪ್ರಕ್ರಿಯೆಯಲ್ಲಿ ಅವಿರೋಧವಾಗಿ ಕೊಟ್ರಯ್ಯ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ದಾವಣಗೆರೆ ಉಪವಿಭಾಗ ಸಹಕಾರ ಸಂಘದ ಸಹಾಯಕ ನಿಬಂಧಕರ ಕಛೇರಿಯಲ್ಲಿ ಅಭಿವೃದ್ಧಿ ಅಧಿಕಾರಿ ಜಿ.ಎಸ್‌. ಸುರೇಂದ್ರ ಕಾರ್ಯನಿರ್ವಹಿಸಿದರು ಎಂದು ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜೆ.ಎನ್. ಪ್ರಭು ತಿಳಿಸಿದ್ದಾರೆ.

error: Content is protected !!