ದಾವಣಗೆರೆ, ಜು. 28- ಮಲ್ಲಶೆಟ್ಟಿ ಹಳ್ಳಿ ಬಳಿಯ ಕೆರೆ ತುಂಬಿದ್ದು, ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಮಾಯಕೊಂಡ ಶಾಸಕ ಬಸವಂತಪ್ಪ ಮಲ್ಲಶೆಟ್ಟ ಹಳ್ಳಿ ಬಳಿಯ ಜಾಕ್ವೆಲ್ಗೆ ಭೇಟಿ ನೀಡಿ ಬರಿದಾಗಿರುವ ಕೆರೆಗೆ ನೀರು ತುಂಬಿಸುವ ಕುರಿತು ಅಧಿಕಾರಿ ಗಳಿಗೆ ತಾಕೀತು ಮಾಡಿದ್ದರು. ಈ ವರದಿ ಜನತಾವಾಣಿ ಪತ್ರಿಕೆಯಲ್ಲಿ ಪ್ರಕಟಗೊಂಡಿತ್ತು.
ವರದಿ ಪ್ರಕಟಗೊಂಡ ಮರುದಿನವೇ ಅಧಿಕಾರಿಗಳು ಕಾರ್ಯೋನ್ಮುಖರಾಗಿದ್ದು, ಕೆರೆಗೆ ನೀರು ಹರಿದು ಬಂದಿದೆ. ಮಲ್ಲಶೆಟ್ಟಿ ಹಳ್ಳಿಯ ಅವಿನಾಶ್ ಹಾಗೂ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.