ಶಾಮನೂರು ರಸ್ತೆಯ ಎಸ್.ಎಸ್.ಬಡಾವಣೆ `ಎ’ ಬ್ಲಾಕ್ನಲ್ಲಿರುವ ಶ್ರೀ ಮಹಾ ಗಣಪತಿ, ಶ್ರೀ ವೀರಭದ್ರೇಶ್ವರ ಸ್ವಾಮಿಯ ಗುಗ್ಗಳ ಹಾಗೂ ಕೆಂಡಾದರ್ಚನೆ ಕಾರ್ಯ ಕ್ರಮವು ಇಂದು ಬೆಳಿಗ್ಗೆ ಎಡೆಯೂರು ಕ್ಷೇತ್ರದ ಷ|| ಬ್ರ|| ರೇಣುಕಾ ಶಿವಾಚಾರ್ಯ ಸ್ವಾಮೀಜಿ ದಿವ್ಯ ಸಾನ್ನಿಧ್ಯದಲ್ಲಿ ಕಾರ್ಯಕ್ರಮ ಗಳು ನಡೆಯುವವು.ಮುಂಜಾನೆ 5 ಗಂಟೆಗೆ ರುದ್ರಾಭಿಷೇಕ ನಂತರ 7 ಗಂಟೆಗೆ ಮಹಾರಾಜಪೇಟೆಯಿಂದ ಗುಗ್ಗಳ ಹೊರಟು ದೇವಸ್ಥಾನ ತಲುಪಿದ ನಂತರ ಕೆಂಡದಾರ್ಚನೆ ನಡೆಯಲಿದೆ. ನಂತರ ಸರ್ವ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗವಿರುತ್ತದೆ.
ನಗರದಲ್ಲಿ ಇಂದು ಶ್ರೀ ವೀರಭದ್ರೇಶ್ವರ ಸ್ವಾಮಿ ಗುಗ್ಗಳ
![09 veerabhadra guggala 02.05.2024 ನಗರದಲ್ಲಿ ಇಂದು ಶ್ರೀ ವೀರಭದ್ರೇಶ್ವರ ಸ್ವಾಮಿ ಗುಗ್ಗಳ](https://janathavani.com/wp-content/uploads/2024/05/09-veerabhadra-guggala-02.05.2024.jpg)