ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಅವರು ಬಂಜಾರ ಸಂಸ್ಕೃತಿ ಬಿಂಬಿಸುವ ಶಾಲು ನೀಡಿದರು. ಹಾವೇರಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಅವರು ರುದ್ರಾಕ್ಷಿಯ ಹಾರ ತೊಡಿಸಿದರು. ಸಂಸದ ಜಿ.ಎಂ. ಸಿದ್ದೇಶ್ವರ ಅವರು ಕಮಲದ ಹೂವಿರುವ ಪೇಟ ತೊಡಿಸಿದರು. ಜೆಡಿಎಸ್ನ ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್ ಹಾಗೂ ಜೆಡಿಎಸ್ ಮುಖಂಡ ಚಿದಾನಂದಪ್ಪ ಅವರು ಶ್ರೀ ಹರಿಹರೇಶ್ವರ ಮೂರ್ತಿಯನ್ನು ನೀಡಿದರು. ಇದೇ ವೇಳೆ ಪ್ರಧಾನಿಗೆ ಶ್ರೀ ರಾಮನ ಬೆಳ್ಳಿಯ ಮೂರ್ತಿ ನೀಡಲಾಯಿತು.
ಪ್ರಧಾನಿ ಮೋದಿಗೆ ಶ್ರೀ ರಾಮನ ಬೆಳ್ಳಿಯ ಮೂರ್ತಿ
![19 modi rama 29.04.2024 ಪ್ರಧಾನಿ ಮೋದಿಗೆ ಶ್ರೀ ರಾಮನ ಬೆಳ್ಳಿಯ ಮೂರ್ತಿ](https://janathavani.com/wp-content/uploads/2024/04/19-modi-rama-29.04.2024-860x465.jpg)