ಉಜ್ಜಯಿನಿ ಶ್ರೀ ಮರುಳಸಿದ್ದೇಶ್ವರ ಸ್ವಾಮಿಯ ತೇರುಗಾಲಿ ಹೊರಗೆ

ಉಜ್ಜಯಿನಿ ಶ್ರೀ ಮರುಳಸಿದ್ದೇಶ್ವರ ಸ್ವಾಮಿಯ ತೇರುಗಾಲಿ ಹೊರಗೆ

ಕೊಟ್ಟೂರು, ಏ. 28 – ಉಜ್ಜಿನಿಯ ಉಜ್ಜಯಿನಿ ಜಗದ್ಗುರು ಶ್ರೀ ಮರುಳಸಿದ್ದೇಶ್ವರ ಸ್ವಾಮಿಯ ತೇರು ಗಾಲಿಯನ್ನು ಭಾನುವಾರ ಸಕಲ ವಾದ್ಯ ಮೇಳಗಳೊಂದಿಗೆ ಭಕ್ತರ ಜಯ ಘೋಷದೊಂದಿಗೆ ರಥವನ್ನು ತೇರು ಬಯಲುವರಿಗೆ ಎಳೆಯಲಾಯಿತು. ಜಗದ್ಗುರು ಶ್ರೀ ಮರುಳ  ಸಿದ್ದೇಶ್ವರ ಸ್ವಾಮಿಯ ರಥೋತ್ಸವವು ಮೇ 12 ಭಾನುವಾರ ನಡೆಯಲಿದ್ದು,  ಶಿಖರಕ್ಕೆ ತೈಲಾಭಿಷೇಕವು ಮೇ 13 ರಂದು ನಡೆಯಲಿದೆ. ಮೇ 17 ರಂದು ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮಗಳು ನಡೆಯಲಿವೆ. 

ಈ ಸಂದರ್ಭದಲ್ಲಿ ಗ್ರಾಮದ ಸಮಸ್ತ ಭಕ್ತರು ಹಾಗೂ 9 ಪಾದಗಟ್ಟೆಗಳ ಭಕ್ತಾದಿಗಳು ಸುತ್ತಮುತ್ತಲಿನ ಹಳ್ಳಿಯ ಭಕ್ತಾದಿಗಳು ಇದ್ದರು.

error: Content is protected !!