ಭಾರತ್ ಕಾಲೋನಿಯಲ್ಲಿ ಆರೈಕೆ ಆಸ್ಪತ್ರೆಯಿಂದ ಆರೋಗ್ಯ ಶಿಬಿರ

ಭಾರತ್ ಕಾಲೋನಿಯಲ್ಲಿ ಆರೈಕೆ ಆಸ್ಪತ್ರೆಯಿಂದ ಆರೋಗ್ಯ ಶಿಬಿರ

ದಾವಣಗೆರೆ, ಏ. 22- ನಗರದ ಆರೈಕೆ ಸೂಪರ್ ಸ್ಪೆಷಾಲಿಟಿ ಹಾಸ್ಪಿಟಲ್ ಹಾಗೂ ಪ್ರೀತಿ ಆರೈಕೆ ಟ್ರಸ್ಟ್ ಇವರ ಸಹಯೋಗದೊಂದಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ನಗರದ ಭಾರತ್ ಕಾಲೋನಿ ಪಂಚಮುಖಿ ದೇವಸ್ಥಾನ ಬಳಿ ಆಯೋಜಿಸಲಾಗಿತ್ತು 

ಡಾ. ಟಿ.ಜಿ. ರವಿಕುಮಾರ್ ಅವರ ನೇತೃತ್ವದಲ್ಲಿ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿಯಾಗಿ ನಡೆಯಿತು. ಶಿಬಿರದಲ್ಲಿ ಹೃದ್ರೋಗ, ಕೀಲು, ಮೂಳೆ, ಮೂತ್ರಪಿಂಡ, ನರರೋಗ ಹೃದಯಕ್ಕೆ ಸಂಬಂಧಿಸಿದ ಎಲ್ಲಾ ಚಿಕಿತ್ಸೆಗಳನ್ನು ಉಚಿತವಾಗಿ ತಪಾಸಣೆ ಮಾಡಲಾಯಿತು.

error: Content is protected !!