ನಗರದಲ್ಲಿ ಇಂದು ಸೈಕಲ್ ವಿತರಣೆ

ನಗರದಲ್ಲಿ ಇಂದು ಸೈಕಲ್ ವಿತರಣೆ

ದಾವಣಗೆರೆ, ಏ. 14-  ನಗರದ ಮಹಾಲಕ್ಷ್ಮಿ ಲೇಔಟ್ ಮೂಲಭೂತ ಸೌಲಭ್ಯ ವಂಚಿತವಾಗಿದೆ ಎಂದು ಆರೋಪಿಸಿ ಮತದಾನ ಬಹಿಷ್ಕಾರ ಮಾಡುವ ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರ ಪುತ್ರ ಸಮರ್ಥ ಶಾಮನೂರು ಇಂದು 44ನೇ ವಾರ್ಡಿನ ಮಹಾಲಕ್ಷ್ಮಿ ಬಡಾವಣೆ ನಾಗರಿಕರ ಹಿತರಕ್ಷಣಾ ಸಮಿತಿ ಪದಾಧಿಕಾರಿಗಳು ಹಾಗೂ ಸಾರ್ವಜನಿಕರನ್ನು ಭೇಟಿ ಮಾಡಿ ಮನವೊಲಿಸಿದರು.

ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಸಮರ್ಥ ಅವರು, ಮತದಾನ ನಮ್ಮ ಹಕ್ಕು, ಅಂಬೇಡ್ಕರ್ ಜಯಂತಿ ದಿನದಂದು ಸಂವಿಧಾನದ ಪ್ರಥಮ ಹಕ್ಕು ಮತದಾನವನ್ನು ಬಹಿಷ್ಕರಿಸಿ ಅವಮಾನ ಮಾಡುವುದು ಸರಿಯಲ್ಲ. ನಿಮ್ಮ ಕುಂದು ಕೊರತೆಗಳನ್ನು ಈಗಾಗಲೇ ಸಚಿವರ ಗಮನಕ್ಕೆ ತರಲಾಗಿದ್ದು, ಬಗೆಹರಿಸುವ ನಿಟ್ಟಿನಲ್ಲಿ ಕೆಲಸ ಶುರು ಮಾಡಿದ್ದಾರೆ, ಹಾಗಾಗಿ ಆತಂಕ ಪಡುವ ಅಗತ್ಯವಿಲ್ಲ. ಸಾರ್ವಜನಿಕರು ಬೇಸರವಾಗದೇ ಮತದಾನ ಮಾಡಲು ಮುಂದಾಗಿ ಎಂದು ಮನವಿ ಮಾಡಿದರು.

ಪ್ರತಿಭಟನಾನಿರತ ಸಾರ್ವಜನಿಕರು ಸಮರ್ಥ್ ಶಾಮನೂರು ಅವರ ಮಾತಿಗೆ ಓಗೊಟ್ಟು  ಮತದಾನ ಬಹಿಷ್ಕಾರ ಹಿಂಪಡೆಯಲು ಮುಂದಾದರು.

error: Content is protected !!