ರಾಷ್ಟ್ರೀಯ ಜಂತು ಹುಳು ನಿರ್ಮೂಲನಾ ದಿನಾಚರಣೆ

ರಾಷ್ಟ್ರೀಯ ಜಂತು ಹುಳು ನಿರ್ಮೂಲನಾ ದಿನಾಚರಣೆ

ದಾವಣಗೆರೆ, ಫೆ. 26 – ಭಾರತೀಯ ರೆಡ್‌ ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆಯ ವತಿಯಿಂದ ಹೆಗಡೆ ನಗರದಲ್ಲಿ 1000 ಮಕ್ಕಳಿಗೆ ಉಚಿತವಾಗಿ ಜಂತುಹುಳು ನಿರ್ಮೂಲನೆ ಮಾತ್ರೆಗಳನ್ನು ವಿತರಿಸುವ ಮೂಲಕ ರಾಷ್ಟ್ರೀಯ ಜಂತುಹುಳು ದಿನವನ್ನು ಆಚರಿಸಲಾಯಿತು.

ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ದಾವಣಗೆರೆ ಜಿಲ್ಲಾ ಶಾಖೆಯ ಸಭಾಪತಿ ಡಾ.ಎ.ಎಂ. ಶಿವಕುಮಾರ್ ನೇತೃತ್ವದಲ್ಲಿ ಪ್ರಧಾನ ಕಾರ್ಯ ಅದರ್ಶಿ ಆನಂದ್ ಜ್ಯೋತಿ, ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಸಿಎ ಉಮೇಶ್ ಶೆಟ್ಟಿ, ನಿರ್ದೇಶಕರಾದ ಮೊಹಮ್ಮದ್ ಇನಾಯಿತ್‌ಉಲ್ಲಾ, ಡಿ.ಎನ್. ಶಿವಾನಂದ್, ಎ.ಜೆ. ರವಿಕುಮಾರ್, ವ್ಯವಸ್ಥಾಪಕ ರವಿಂದ್ರನಾಥ್, ಕೋ-ಆರ್ಡಿನೇಟರ್ ಮತ್ತು ಕೌನ್ಸಿಲರ್ ಎನ್.ಜಿ. ಶಿವಕುಮಾರ್, ಸಿಬ್ಬಂದಿ ಪದ್ಮಬಾಯಿ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. 

error: Content is protected !!