ಹರಿಹರ, ಫೆ. 18 – ನಗರದಲ್ಲಿ ಹಲವಾರು ದಶಕ ಗಳಿಂದ ಪತ್ರಿಕಾ ರಂಗದಲ್ಲಿ ಗಣನೀಯ ಸೇವೆ ಸಲ್ಲಿಸಿದ 60 ವರ್ಷ ಮೇಲ್ಪಟ್ಟ ಹಿರಿಯ ಪತ್ರಕರ್ತರಾದ ಜಿ. ಕೆ. ಶಂಕ್ರಪ್ಪ, ಬಿ. ಎಂ. ಚಂದ್ರಶೇಖರ್, ಸುಬ್ರಹ್ಮಣ್ಯ ನಾಡಿ ಗೇರ, ಹೆಚ್. ಕೆ. ಕೊಟ್ರಪ್ಪ, ಇಬುಜರ್ ರೆಹಮಾನ್, ಜಿ. ನಂಜಪ್ಪ, ಎಂ. ಕೆ ರಾಮಶೆಟ್ಟಿ, ಬಿ. ಮುಗ್ಧಂ ಸೇರಿದಂತೆ ಹಲವರನ್ನು ದಾವಣಗೆರೆ ನಗರದ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಕಲ್ಯಾಣ ಮಂಟಪ ಸಭಾಂಗಣದಲ್ಲಿ ನಡೆದ 38ನೇ ರಾಜ್ಯ ಮಟ್ಟದ ಪತ್ರಕರ್ತರ ಸಮ್ಮೇಳನದಲ್ಲಿ ಸನ್ಮಾನಿಸಲಾಯಿತು.
ಪ್ರಶಸ್ತಿ ಪಡೆದ ಹಿರಿಯ ಪತ್ರಕರ್ತರಿಗೆ ಹರಿಹರ ನಗರದ ಪತ್ರಕರ್ತರಾದ ಶಾಂಭವಿ, ಡಿ.ಜಿ. ನಾಗರಾಜ್, ಎಂ. ಚಿದಾನಂದ್ ಕಂಚಿಕೇರಿ, ಶೇಖರಗೌಡ, ಹೆಚ್.ಸಿ. ಕೀರ್ತಿಕುಮಾರ್, ಜಿಗಳಿ ಪ್ರಕಾಶ್, ಸದಾನಂದ, ದೇವರಾಜ್, ಪೂಜಾರ್ ಮಂಜುನಾಥ್, ಚಂದ್ರಶೇಖರ್, ಜಿ. ಮಂಜುನಾಥ್, ಇರ್ಫಾನ್, ಕೃಷ್ಣ ಪಿ. ರಾಜೊಳ್ಳಿ, ಸುಧಾಕರ, ಜಿ. ಎಸ್. ಕುಮಾರ, ರಾಜನಹಳ್ಳಿ ಮಂಜುನಾಥ್, ವಿಶ್ವನಾಥ, ಸುರೇಶ್ ಕುಣೆಬೆಳೆಕೆರೆ, ಸೋಮಶೇಖರ್ ಸೇರಿದಂತೆ ಇತರರು ಅಭಿನಂದನೆ ತಿಳಿಸಿದ್ದಾರೆ.