ಕೊಟ್ಟೂರು : ಸಂಭ್ರಮದ ಗಣರಾಜ್ಯೋತ್ಸವ

ಕೊಟ್ಟೂರು : ಸಂಭ್ರಮದ ಗಣರಾಜ್ಯೋತ್ಸವ

ಕೊಟ್ಟೂರು, ಜ. 28- ತಾಲ್ಲೂಕಿನ ಜ್ಯೂನಿಯರ್ ಕಾಲೇಜ್ ಕ್ರೀಡಾಂಗಣದಲ್ಲಿ ತಾಲ್ಲೂಕು ಆಡಳಿತದ ವತಿಯಿಂದ 75 ನೇ  ಗಣರಾಜ್ಯೋತ್ಸವ ದಿನಾಚರಣೆಯ ಸಮಾರಂಭವನ್ನು ಶುಕ್ರವಾರ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದ ನಿಮಿತ್ತ ತಾಲ್ಲೂಕು ದಂಡಾಧಿಕಾರಿ ಜಿ.ಕೆ. ಅಮರೇಶ್ ಮತ್ತು ಶಾಸಕ ಕೆ. ನೇಮಿರಾಜ್ ನಾಯ್ಕ್ ಧ್ವಜಾರೋಹಣ ನೆರವೇರಿಸಿದರು. 

ತಾಲ್ಲೂಕಿನ ಜ್ಯೂ. ಕಾಲೇಜು ಮೈದಾನದಲ್ಲಿ 75ನೇ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಪಿಎಸ್ಐ ಗೀತಾಂಜಲಿ ಶಿಂಧೆ ಅವರು ಪಥ ಸಂಚಲನ ನಡೆಸಿದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಎ. ನಸರುಲ್ಲಾ, ಸಿಪಿಐ ವೆಂಕಟಸ್ವಾಮಿ, ಇಸಿಓ ಅಜ್ಜಪ್ಪ, ನಿಂಗಪ್ಪ, ಡಿಆ‌ರ್‌ಪಿ ಮತ್ತು ಸಿಆರ್‌ಪಿ , ಶಶಿಧರ್ ಮೈದೂರು ಸೇರಿದಂತೆ,  ತಾಲ್ಲೂಕು ಆಡಳಿತದ ಸಿಬ್ಬಂದಿಗಳು ಇದ್ದರು.

error: Content is protected !!