ದಾವಣಗೆರೆ, ಜ. 22 – ಶ್ರೀ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ನಗರದ ಚೌಕಿಪೇಟೆ ಹಿಂಭಾಗದ ಹಳೆ ಗುಜರಿ ಲೈನ್ ರಸ್ತೆಯಲ್ಲಿ, ಅಕ್ಕಿ ನುಚ್ಚು ಅಂಗಡಿಗಳ ವರ್ತಕರ ಅಧ್ಯಕ್ಷ ಎಂ.ವಿ. ಜಯಪ್ರಕಾಶ್ ಮಾಗಿಯವರ ಅಧ್ಯಕ್ಷತೆ ಮತ್ತು ಶ್ರೀ ರಾಮನ ಭಕ್ತರ ಸಮ್ಮುಖದಲ್ಲಿ ಸಿಹಿ ಹಂಚಿ ಪಟಾಕಿ ಸಿಡಿಸಿ ರಾಮನಾಮ ಸ್ಮರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಹಿರಿಯರಾದ ಮಾಳಗಿ ಪರಪ್ಪ, ಹಲವಾಗಲು ರುದ್ರಣ್ಣ, ಬಾಳೇ ಹೊಲದ ಸಿದ್ದಣ್ಣ, ಹೇಮಾ ಟ್ರೇಡರ್, ಪುಟ್ಟಣ್ಣ, ಕಮಲ, ಗಿರೀಶ್, ಬಿ.ಪಿ.ಎಂ. ಜಗದೀಶ್, ಮಳಗಿ ಷಣ್ಮುಖ, ಬಿಜಾಪುರ ಶರಣಪ್ಪ, ಸಿದ್ದು ಬಿಜಾಪುರ, ಹುಬ್ಬಳ್ಳಿ ಸತೀಶ್, ಜಯರಾಜ ಮೇಟಿ, ಬಾದಾಮಿ ವಿಶ್ವನಾಥ್, ಬಸವರಾಜ ಅಥಣಿ ಟಿ.ಎಸ್. ಪರಶುರಾಮ ವಿನಾಯಕ ಬ್ಯಾಡಗಿ ಮತ್ತು ಅನೇಕ ವರ್ತಕ ಸಮುದಾಯ ಮತ್ತು ಹಿತೈಷಿಗಳು ಉಪಸ್ಥಿತರಿದ್ದರು.
ಅಕ್ಕಿ ನುಚ್ಚು ಅಂಗಡಿಗಳ ವರ್ತಕರ ಸಂಭ್ರಮ
![18 akki nucchu news 23.01.2024 ಅಕ್ಕಿ ನುಚ್ಚು ಅಂಗಡಿಗಳ ವರ್ತಕರ ಸಂಭ್ರಮ](https://janathavani.com/wp-content/uploads/2024/01/18-akki-nucchu-news-23.01.2024-860x481.jpg)