ಆರ್.ಜಿ ಬೂಸ್ನೂರ್ ಶಾಲಾ ವಾರ್ಷಿಕೋತ್ಸವ

ಆರ್.ಜಿ ಬೂಸ್ನೂರ್ ಶಾಲಾ ವಾರ್ಷಿಕೋತ್ಸವ

ದಾವಣಗೆರೆ, ಜ. 22- ಶ್ರೀ ಬೂಸ್ನೂರ್  ವೀರಣ್ಣ ಟ್ರಸ್ಟ್ ಹಾಗೂ ರಂಜಿತ್ ಮಲ್ ಗಾಂಧಿ ಎಜುಕೇಶನ್ ಟ್ರಸ್ಟ್ ಇವರ ಆರ್.ಜಿ ಬೂಸ್ನೂರ್ ಶಾಲಾ ವಾರ್ಷಿ ಕೋ ತ್ಸವ `ಉಡಾನ್ 2024′ ಕಾರ್ಯಕ್ರಮ ನಗರದ ಬಾಪೂಜಿ ಸಮುದಾಯ ಭವನದಲ್ಲಿ ಶನಿವಾರ ನಡೆಯಿತು.

 ಎಸ್.ಎಸ್. ಕೇರ್ ಟ್ರಸ್ಟ್  ಆಜೀವ ಟ್ರಸ್ಟಿ ಡಾ. ಪ್ರಭಾ ಮಲ್ಲಿಕಾರ್ಜುನ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು, ವಿದ್ಯಾರ್ಥಿಗಳು ಕೇವಲ ಓದುವುದರ ಕಡೆ ಮಾತ್ರ ಗಮನ ಕೊಡದೆ, ಪಠ್ಯೇತರ  ಚಟುವಟಿಕೆಗಳಾದ ಚಿತ್ರಕಲೆ, ಹಾಡುಗಾರಿಕೆ, ಆಟಗಳು, ಕುಶಲಕರ್ಮಿತನದ ಕಡೆಯೂ ಗಮನ ಹರಿಸಬೇಕು ಎಂದು ಕರೆ ನೀಡಿದರು.

 ತಮ್ಮ ವಿದ್ಯಾರ್ಥಿ ಜೀವನವನ್ನು ನೆನಪಿಸಿಕೊಂಡ ಅವರು, ತಮ್ಮ ಕಾಲದಲ್ಲಿ ಉತ್ತಮ ಶಿಕ್ಷಕರು ಮತ್ತು ಮುಖ್ಯ ಶಿಕ್ಷಕರು ಇರುತ್ತಿದ್ದರು. ಅವರು ವಿದ್ಯಾರ್ಥಿಗಳ ಎಲ್ಲಾ ಬೇಕು ಬೇಡಗಳಿಗೆ ಸ್ಪಂದಿಸುತ್ತಿದ್ದರು. ಈಗ ಆರ್.ಜಿ ಬೂಸ್ನೂರ್ ಶಾಲೆಯ ವಾತಾವರಣ ನೋಡಿದರೆ ಇಲ್ಲಿಯೂ ಸಹ ಅಂತಹ ಶಿಕ್ಷಕರನ್ನು ಕಾಣಬಹುದಾಗಿದೆ ಎಂದರು.

ಮತ್ತೋರ್ವ ಅತಿಥಿ ಡಾ.  ಸಿದ್ದಲಿಂಗಪ್ಪ ಮಕ್ಕಳನ್ನು ಉದ್ದೇಶಿಸಿ ಮಾತನಾಡಿದರು. ಆರ್.ಜಿ ಗ್ರೂಪಿನ ಅಧ್ಯಕ್ಷರಾದ  ಶ್ವೇತ ಆರ್.ಗಾಂಧಿ ಗುಣಮಟ್ಟದ ಶಿಕ್ಷಣದ ಬಗ್ಗೆ ತಿಳಿಸಿಕೊಟ್ಟರು. ಕಾರ್ಯದರ್ಶಿ ಸರ್ವಮಂಗಳ ಎನ್.,  ಶಾಲೆಯ ಪ್ರಾಂಶುಪಾಲರಾದ ಅರ್ಚನ ಎಸ್.ಎಂ ಉಪಸ್ಥಿತರಿದ್ದರು.

error: Content is protected !!