ದಾವಣಗೆರೆ, ಜ. 18 – ಬರುವ ಮಾರ್ಚ್ 11 ರಿಂದ 17 ರವರೆಗೆ ನಗರದ ಬಾಪೂಜಿ ಬ್ಯಾಂಕ್ ಸಮು ದಾಯ ಭವನದಲ್ಲಿ ನಡೆಯಲಿರುವ 31ನೇ ಶ್ರೀ ರಾಘವೇಂದ್ರ ಸಪ್ತಾಹ ಮಹೋತ್ಸವದ ಆಮಂತ್ರಣ ಪತ್ರಿಕೆಗೆ ಮಂತ್ರಾಲಯದ ರಾಯರ ಸನ್ನಿಧಿಯಲ್ಲಿ ಗುರುವಾರ ಪೂಜೆ ಸಲ್ಲಿಸಲಾಯಿತು.
ನಗರದಿಂದ ತೆರಳಿದ್ದ ಶ್ರೀ ರಾಘವೇಂದ್ರ ಸಪ್ತಾಹ ಮಹೋತ್ಸವ ಸಮಿತಿಯ ಸದಸ್ಯರು ಮಹೋತ್ಸವಕ್ಕೆ ಆಗಮಿಸುವಂತೆ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠಾಧೀಶರಾದ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರಿಗೆ ಆಮಂತ್ರಣ ಪತ್ರಿಕೆ ನೀಡಿದರು. ಇದೇ ಸಂದರ್ಭದಲ್ಲಿ ಶ್ರೀಪಾದಂಗಳವರು ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು.
ಮಂತ್ರಾಲಯ ದಾಸ ಸಾಹಿತ್ಯ ಯೋಜನೆಯ ನಿರ್ದೇಶಕ ಕೆ. ಅಪ್ಪ ಣ್ಣಾಚಾರ್ಯರು, ಪರಿಮಳಾ ಚಾರ್ಯ ಸೇರಿ ಅನೇಕ ಪಂಡಿತರಿಗೆ ಇದೇ ಸಂದರ್ಭದಲ್ಲಿ ಆಹ್ವಾನ ನೀಡಲಾಯಿತು.
ಶ್ರೀ ರಾಘವೇಂದ್ರ ಸಪ್ತಾಹ ಸಮಿತಿ ಕಾರ್ಯದರ್ಶಿ ಕಂಪ್ಲಿ ಗುರು ರಾಜಾಚಾರ್, ಸಹ ಕಾರ್ಯದರ್ಶಿ ಗಳಾದ ಎನ್. ಆರ್. ನಾಗಭೂಷಣ ರಾವ್, ಸತ್ಯಬೋಧ ಕುಲಕರ್ಣಿ, ನಿರ್ವಹಣಾ ಸಮಿತಿಯ ಡಾ. ಸಿ.ಕೆ. ಆನಂದತೀರ್ಥಾಚಾರ್, ಪಲ್ಲಕ್ಕಿ ವಾಸುದೇವಾಚಾರ್, ಬದರಿನಾರಾಯಣ, ಪಿ.ಕೆ. ಪ್ರಕಾಶ್, ಎಸ್.ಟಿ. ಕುಲಕರ್ಣಿ, ರಾಜಣ್ಣ, ಹಿರಿಯ ಪತ್ರಕರ್ತ ರಮೇಶ ಜಹಗೀರದಾರ್ ಮತ್ತು ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.