ಮಕ್ಕಳಲ್ಲಿ ಕಲಿಕೆ ಗುಣಮಟ್ಟ ಹೆಚ್ಚಲು ವಸ್ತು ಪ್ರದರ್ಶನಗಳು ಸಹಕಾರಿ

ಮಕ್ಕಳಲ್ಲಿ ಕಲಿಕೆ ಗುಣಮಟ್ಟ ಹೆಚ್ಚಲು ವಸ್ತು ಪ್ರದರ್ಶನಗಳು ಸಹಕಾರಿ

ಶ್ರೀ ಸೋಮೇಶ್ವರ ವಿದ್ಯಾಲಯದ ಕಾರ್ಯಕ್ರಮದಲ್ಲಿ ವಿಜ್ಞಾನ ವಿಭಾಗದ ಪರಿವೀಕ್ಷಕರಾದ ವಸಂತ ಕುಮಾರಿ  

ದಾವಣಗೆರೆ, ಜ.16- ಶಾಲಾ ಮಟ್ಟದಲ್ಲಿ ನಡೆಯುವ ವಸ್ತು ಪ್ರದರ್ಶನಗಳು ಮಕ್ಕಳಲ್ಲಿ ಕಲಿಕೆಯ ಗುಣಮಟ್ಟ ಹಾಗೂ ಜ್ಞಾನದ ಕೌಶಲ್ಯ ಹೆಚ್ಚಾಗಲು ಸಹಕಾರಿಯಾಗುತ್ತವೆ ಎಂದು ವಿಜ್ಞಾನ ವಿಭಾಗದ ಪರಿವೀಕ್ಷಕರಾದ ವಸಂತ ಕುಮಾರಿ ತಿಳಿಸಿದರು.  ನಗರದ   ಶ್ರೀ ಸೋಮೇಶ್ವರ ವಿದ್ಯಾಲಯದ ಪೂರ್ವ ಪ್ರಾಥಮಿಕ ಹಂತದ ಮಕ್ಕಳಿಗೆ ನಡೆದ ವಸ್ತು ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.   ಮಕ್ಕಳು ಮೊಬೈಲ್ ಬಳಕೆ ಕಡಿಮೆ ಮಾಡಬೇಕು, ಗಿಡಗಳನ್ನು ನೆಟ್ಟು ಬೆಳೆಸಬೇಕು. ಅಲ್ಲದೆ ಮಕ್ಕಳು ಪೋಷಕರು ಹಾಗೂ ಶಿಕ್ಷಕರ ಸಲಹೆ, ಮಾರ್ಗದರ್ಶನ ಪಾಲಿಸಿ ಉತ್ತಮ ಪ್ರಜೆಗಳು ಹಾಗೂ ಸಾಧಕರಾಗಬೇಕೆಂದರು

ಪಾಠದ ಜೊತೆ ಇಂತಹ  ವಸ್ತು ಪ್ರದರ್ಶನ ಏರ್ಪಡಿಸುವುದರಿಂದ ಕಲಿಕಾ ಗುಣಮಟ್ಟ ಕೂಡ ಹೆಚ್ಚಾಗುತ್ತದೆ, ಮಕ್ಕಳಿಗೆ ಪ್ರಾಯೋಗಿಕವಾಗಿ ಹಲವು ವಿಷಯಗಳನ್ನು ಕಲಿಯಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.

 ವಸ್ತು ಪ್ರದರ್ಶನದಲ್ಲಿ ಮಕ್ಕಳು ಮಾಡಿದ್ದ ಮಾದರಿಗಳು ಎಲ್ಲರ ಗಮನ ಸೆಳೆದವು. ಈ ವೇಳೆ ಪ್ರಾಂಶುಪಾಲರಾದ ಶ್ರೀಮತಿ ಎನ್. ಪ್ರಭಾವತಿ, ಆಡಳಿತಾಧಿಕಾರಿ ಹರೀಶ್‌ಬಾಬು, ಮುಖ್ಯೋಪಾಧ್ಯಾಯರಾದ ಶ್ರೀಮತಿ ಗಾಯತ್ರಿ, ಶ್ರೀಮತಿ ಮಾಲಾ, ತೀರ್ಪುಗಾರರಾದ ನಾಗವೀಣ, ಲಕ್ಷ್ಮಿ, ತೇಜಸ್ವಿನಿ, ಅನಿತಾ  ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

error: Content is protected !!