ಕಡ್ಡಾಯ ಮತದಾನದ ಕಾನೂನು ಜಾರಿಯಾಗಬೇಕು

ಮಾನ್ಯರೇ,

ಇತ್ತೀಚಿನ ದಿನಗಳಲ್ಲಿ ಚುನಾವಣೆ ಬಂತೆಂದರೆ ಶೇಕಡವಾರು ಮತದಾನ ಕಡಿಮೆಯಾಗಿದೆ ಎಂಬುದು ಚರ್ಚಿತ ವಿಚಾರ. ಲೋಕಸಭೆ, ವಿಧಾನಸಭೆ, ಮಹಾನಗರ ಪಾಲಿಕೆ, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಸೇರಿದಂತೆ ಯಾವುದೇ ಚುನಾವಣೆಗಳು ನಡೆದರೂ ಮತದಾನ ಪ್ರಮಾಣ ಹೆಚ್ಚಾಗಬೇಕು. ಮತದಾನ ಮಾಡದವರಿಗೆ ಶಿಕ್ಷೆ ವಿಧಿಸುವಂತಹ ಕಾನೂನು ಜಾರಿಯಾಗಬೇಕು.  ಮತದಾನ ಕಡ್ಡಾಯಗೊಳಿಸುವುದನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸ ಬೇಕಿದೆ. ಹಾಗಾಗಿ, ಕೆಲವು ಸಲಹೆಗಳು ಇಲ್ಲಿವೆ. ಇವು ಜಾರಿಯಾದರೆ ಮತದಾನ ಪ್ರಮಾಣ ಹೆಚ್ಚಾಗುವುದು ಖಚಿತ. 

ಸರ್ಕಾರಿ ಸೌಲಭ್ಯ ಪಡೆಯಲು ಮತದಾನ ಕಡ್ಡಾಯ.   ಕನಿಷ್ಠ ವಿದ್ಯಾರ್ಹತೆ.   ಆಧಾರ್ ಕಾರ್ಡ್‌ನಂತೆಯೇ ಮತದಾನದ ಸ್ವೀಕೃತಿ, ಕೆವೈಸಿ ಕಡ್ಡಾಯವಾಗಿ ಕಟ್ಟುನಿಟ್ಟಾಗಬೇಕು. 

ಸಾಮಾನ್ಯ ಮನುಷ್ಯನನ್ನು ಆಯ್ಕೆ ಮಾಡಲು ಸಮಾಜಕ್ಕೆ ಒಂದು ಅವಕಾಶ ಹಾಗೂ ಬಂಡವಾಳ ಶಾಹಿಗಳನ್ನು ಬಗ್ಗುಬಡಿಯುವ ಪ್ರಯತ್ನ.   ಶೇಕಡವಾರು ಮತದಾನ ಹೆಚ್ಚಿಸಬಹುದು. ಅದರಿಂದ ಮತದಾನ ಓಲೈಕೆ ಪಿಡುಗು ತಪ್ಪಿಸಬಹುದು. 

ಮತದಾನ ಮಾಡಿದ ಸ್ವೀಕೃತಿ ಪತ್ರ ಎಲ್ಲಾ ಸೌಲಭ್ಯ ಪಡೆಯಲು ಮಾನದಂಡವಾಗಬೇಕು. ಅದು ನಾಗರಿಕನ ಬದ್ಧತೆಯಾಗಬೇಕು.  ಮತದಾನ ಮಾಡಲು ಅವಶ್ಯಕವಿರುವ ಮತದಾನದ ಗುರುತಿನ ಚೀಟಿಯನ್ನು ಸರ್ಕಾರದ ಕನಿಷ್ಠ ವಯೋಮಿತಿಗೆ ತಲುಪಿದ ವ್ಯಕ್ತಿಯೂ ಕಡ್ಡಾಯವಾಗಿ ಚುನಾವಣಾಧಿಕಾರಿಗಳ ಕಚೇರಿಗೆ ವೈಯಕ್ತಿಕವಾಗಿ ಹೋಗಿ ಪಡೆಯತಕ್ಕದ್ದು. ಇಲ್ಲವಾದಲ್ಲಿ ವಾರ್ಷಿಕವಾಗಿ ದಂಡ ಪಾವತಿಸಿದರೆ ಮಾತ್ರ ಚೀಟಿ ಪಡೆಯಲು ಅರ್ಹ. 

 ಮತದಾನದ ವೇಳೆಯನ್ನು ಹೆಚ್ಚಿಸಬೇಕು.   ಮತದಾನ ಮಾಡಿದ ಸ್ವೀಕೃತಿ ಆ ಕ್ಷೇತ್ರದ ಇನ್ನೊಂದು ಯಾವುದೇ ಚುನಾವಣೆಯ ತನಕ ಮಾತ್ರ ಮಾನ್ಯತೆ ಇರಬೇಕು.   ಚಾಲನಾ ಪರವಾನಗಿ ಪಡೆಯಲು ವಿದ್ಯಾರ್ಹತೆ ನಿಗದಿಪಡಿಸಿರುವಂತೆ ಸೌಲಭ್ಯ ಪಡೆಯಲು ನಿಗದಿಪಡಿಸಬೇಕು. 

ಸೌಲಭ್ಯಗಳನ್ನು ಪಡೆಯಲು ಮೀಸಲಾತಿ ಮಾನದಂಡವನ್ನೇ ಅಳವಡಿಸಬೇಕು. ಸಾಮಾನ್ಯ ಎನ್ನುವ ಕೆಟಗರಿಯನ್ನು ಸಂಪೂರ್ಣ ರದ್ದುಪಡಿಸಬೇಕು. ಅವರವರ ಕೆಟಗರಿಗಳಡಿಯಲ್ಲಿ ಸೌಲಭ್ಯ ಪಡೆಯುವಂತಾಗಬೇಕು. 

ಯಾವುದಾದರೂ ಅನಿವಾರ್ಯ ಕಾರಣಕ್ಕೆ ಮತದಾನ ಮಾಡಲು ಆಗದಿದ್ದ ಪಕ್ಷದಲ್ಲಿ ಕೋರ್ಟ್‌ನ ಮೂಲಕ ಅರ್ಹತೆ ಪಡೆಯಬೇಕು ಮತ್ತು ಅದನ್ನು ಜೀವಿತಾವಧಿಯಲ್ಲಿ ಮೂರು ಬಾರಿ ಮಾತ್ರ ಅವಕಾಶ ಕೊಡಬೇಕು. 

ವಿದ್ಯಾವಂತರು ಮತದಾನದ ದಿನ ಹೊರಗೆ ಹೋಗುತ್ತಾರೆ. ಅವರೂ ಮತದಾನದಿಂದ ವಂಚಿತರಾಗಬಾರದು. ಅಲ್ಲದೇ ಅವರು   ನಿರ್ಲಕ್ಷ್ಯ ವಹಿಸಿದ್ದು, ಸಾಬೀತಾದರೆ ದಂಡದ ಜೊತೆಗೆ  ಸೌಲಭ್ಯ ಕಡಿತಗೊಳಿಸಬೇಕು. 

ಈ ಎಲ್ಲಾ ಅಂಶಗಳು ಜಾರಿಯಾದರೆ ಮತದಾನ ಹೆಚ್ಚಳವಾಗುವುದರಲ್ಲಿ ಸಂಶಯವಿಲ್ಲ.  ಕೇಂದ್ರ ಚುನಾವಣಾ ಆಯೋಗವು  ಇದನ್ನು ಗಂಭೀರವಾಗಿ ಪರಿಗಣಿಸಿ,   ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರಬೇಕು ಎಂದು ವಿನಯವಾಗಿ ಪ್ರಾರ್ಥಿಸುತ್ತೇನೆ. 


ಕಡ್ಡಾಯ ಮತದಾನದ ಕಾನೂನು ಜಾರಿಯಾಗಬೇಕು - Janathavani– ನಾಗಭೂಷಣ್ ವಾಣಿ, ಕೆ. ಬಿ. ಬಡಾವಣೆ, ದಾವಣಗೆರೆ,  ಮೊ. 78994 59295

error: Content is protected !!