ಬೀದಿ ದೀಪ ಕಾಮಗಾರಿ ಉದ್ಘಾಟಿಸಿದ ಎಸ್ಸೆಸ್

ಬೀದಿ ದೀಪ ಕಾಮಗಾರಿ ಉದ್ಘಾಟಿಸಿದ ಎಸ್ಸೆಸ್

ದಾವಣಗೆರೆ, ಜ.2- ಸ್ಥಳೀಯ ದೊಡ್ಡಬೂದಿಹಾಳ್ ರಸ್ತೆಯಲ್ಲಿ ನೂತನವಾಗಿ ಅಳವಡಿಸಿರುವ ಅಕ್ಟೋಗನಲ್ ಕಂಬ ಮತ್ತು ಎಲ್.ಇ.ಡಿ  ಬೀದಿ ದೀಪ ಕಾಮಗಾರಿಯನ್ನು ಶಾಸಕ ಶಾಮನೂರು ಶಿವಶಂಕರಪ್ಪ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಅಧ್ಯಕ್ಷ ಅಯೂಬ್, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಸ್. ಮಲ್ಲಿಕಾರ್ಜುನ್, ಪಾಲಿಕೆ ಮೇಯರ್ ವಿನಾಯಕ ಪೈಲ್ವಾನ್, ಆಯುಕ್ತರಾದ ಶ್ರೀಮತಿ ರೇಣುಕಾ, ಪಾಲಿಕೆ ಸದಸ್ಯರಾದ ಕಬೀರ್ ಖಾನ್, ರಹೀಮ್ ಸಾಬ್, ಶ್ರೀಮತಿ ಸುಧಾ ಮಂಜುನಾಥ್, ಕಾಂಗ್ರೆಸ್ ಮುಖಂಡರುಗಳಾದ ಸಾಗರ್, ಪ್ರವೀಣ್ ಕುಮಾರ್, ರಾಕೇಶ್, ಹಜರತ್ ಅಲಿ, ಬುತ್ತಿ ಹುಸೇನ್, ಕಾರ್ಯಪಾಲಕ ಅಭಿಯಂತರ ಉದಯಕುಮಾರ್  ಉಪಸ್ಥಿತರಿದ್ದರು

error: Content is protected !!