ಭರಮಸಾಗರ ಕೆರೆಗೆ ತರಳಬಾಳು ಜಗದ್ಗುರುಗಳಿಂದ ಪೂಜೆ, ಸನ್ಮಾನ

ಭರಮಸಾಗರ ಕೆರೆಗೆ ತರಳಬಾಳು ಜಗದ್ಗುರುಗಳಿಂದ ಪೂಜೆ, ಸನ್ಮಾನ

ಭರಮಸಾಗರ, ಡಿ.10-  ಇದೇ ದಿನಾಂಕ 28ರಂದು ಭರಮಸಾಗರ ಕೆರೆಗೆ ಸಿರಿಗೆರೆ ಶ್ರೀ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಪೂಜೆ ಹಮ್ಮಿಕೊಂಡಿದ್ದು, ಇದೇ ವೇಳೆ ಕೆರೆಗೆ ನೀರು ತುಂಬಿಸುವಲ್ಲಿ ಶ್ರಮಿಸಿದ ಎಲ್ಲಾ ರಾಜಕೀಯ ಮುಖಂಡರುಗಳನ್ನು ಸನ್ಮಾನಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಅಂದಿನ ಕಾರ್ಯಕ್ರಮಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಡಾ.ಸುಧಾಕರ್, ಸಂಸದ ಜಿ.ಎಂ. ಸಿದ್ದೇಶ್ವರ, ಮಾಜಿ ಸಚಿವ ಹೆಚ್.ಆಂಜನೇಯ ಇತರರು ಆಗಮಿಸಲಿದ್ದಾರೆ.

ಈ ಹಿನ್ನೆಲೆಯಲ್ಲಿ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಭಾನುವಾರ ಪೂರ್ವ ಭಾವಿ ಸಭೆ ನಡೆಯಿತು. ಚಿಕ್ಕಬೆನ್ನೂರು ತೀರ್ಥಪ್ಪ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕೋಗುಂಡಿ ಮಂಜಣ್ಣ, ಡಿ.ಎಸ್. ಪ್ರವೀಣ್ ಕುಮಾರ್, ಬಸವರಾಜಪ್ಪ ಇತರರು ಸಭೆಯಲ್ಲಿದ್ದರು.

error: Content is protected !!