ನಮ್ಮ ಸಾರಥಿಗಳಿಗೆ ನಮ್ಮ ಪ್ರೀತಿ – ಆರೈಕೆ

ನಮ್ಮ ಸಾರಥಿಗಳಿಗೆ ನಮ್ಮ ಪ್ರೀತಿ – ಆರೈಕೆ

ದಾವಣಗೆರೆ, ನ. 10 – ಕನ್ನಡ ಚಿತ್ರರಂಗದ ಪ್ರಯೋಗಾತ್ಮಕ ನಟ, ಚಿಂತಕರಾಗಿದ್ದ ದಿ. ಶಂಕರ್‌ನಾಗ್ ಅವರ ಜನ್ಮ ದಿನದ ಅಂಗವಾಗಿ  ನಗರದ ಆಟೋ ಚಾಲಕರಿಗೆ ಒಂದು ವರ್ಷವಿಡೀ ಉಚಿತವಾಗಿ ಒಪಿಡಿ ಚಿಕಿತ್ಸಾ ಸೌಲಭ್ಯ ನೀಡುವ ಪ್ರೀತಿ ಆರೈಕೆ ಹೆಲ್ತ್ ಕಾರ್ಡ್ ನೀಡಲಾಯಿತು.

ನಗರದ ಆರೈಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಮಾಜಿ ಶಾಸಕರು ಮತ್ತು ಆರೈಕೆ ಸಮೂಹ ಸಂಸ್ಥೆಗಳ ಮುಖ್ಯಸ್ಥ ಟಿ. ಗುರುಸಿದ್ಧನಗೌಡ ಮತ್ತು ಆರೈಕೆ ಆಸ್ಪತ್ರೆ ಮುಖ್ಯಸ್ಥ ಡಾ. ರವಿಕುಮಾರ್ ಟಿ.ಜಿ ಅವರು ಹೆಲ್ತ್ ಕಾರ್ಡ್ ಗಳನ್ನು ವಿತರಿಸಿದರು. ಆಟೋ ಚಾಲಕ ವೀರಪ್ಪ, ಮಂಜುನಾಥ್, ವಾಸೀಂ, ನಾಗರಾಜ್ ಸೇರಿದಂತೆ, ಹಲವು ಆಟೋ ಚಾಲಕರಿಗೆ ಪ್ರೀತಿ- ಆರೈಕೆ ಹೆಲ್ತ್ ಕಾರ್ಡ್ ನೀಡಲಾಯಿತು. 

ಸಮಾರಂಭದಲ್ಲಿ ವೈದ್ಯರಾದ ಡಾ. ಹಾಲಸ್ವಾಮಿ ಕಂಬಾಳಿಮಠ, ರೂಪಾ ಎಚ್.ಕೆ. ಉದ್ಯಮಿಗಳಾದ ನಾಗ ರಾಜಸ್ವಾಮಿ, ಪ್ರವೀಣ್ ಪಾಟೀಲ್, ನುಂಕೇಶ್ ಇದ್ದರು.

error: Content is protected !!