ಕೊಟ್ಟೂರು, ಅ. 15 – ತಾಲ್ಲೂಕು ಪ್ರಾಥಮಿಕ ಕೃಷಿ ಪತ್ತಿ ಸಹಕಾರ ಸಂಘಗಳ ಮತ ಕ್ಷೇತ್ರದಿಂದ ಬಳ್ಳಾರಿ ಜಿಲ್ಲಾ ಸಹಕಾರಿ ಕೇಂದ್ರ ಆಡಳಿತ ಮಂಡಳಿಯ ನಿರ್ದೇಶಕರಾಗಿ ಐ.ದಾರುಕೇಶ್ ಆಯ್ಕೆಯಾಗಿದ್ದಾರೆ.
ಪ್ರತಿ ಸ್ಪರ್ಧಿ ಭರಮರೆಡ್ಡಿ ಮತ್ತು ಐ.ದಾರುಕೇಶ್ ಇವರಿಗೆ ತಲಾ ಐದೈದು ಮತಗಳು ಬಿದ್ದಿದ್ದು, ಸಮಂತರವಾಗಿ ಮತಗಳು ಬಿದ್ದು ತೀವ್ರ ಜಿದ್ದಾಜಿದ್ದಿನಿಂದ ಕೂಡಿತ್ತು. ನಂತರ ಚೀಟಿ ಎತ್ತುವುದರ ಮೂಲಕ ಐ.ದಾರುಕೇಶ್ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿಗಳಾದ ಹೊಸಪೇಟೆ ತಹಶೀಲ್ದಾರರು ಘೋಷಿಸಿದ್ದಾರೆ.
ಈ ಸಂದರ್ಭದಲ್ಲಿ ಕೆ.ಪಿ.ಸಿ.ಸಿ. ಸದಸ್ಯರಾದ ಗೂಳಿ ಮಲ್ಲಿಕಾರ್ಜುನ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಡಕಿ ಮಂಜುನಾಥ್, ಚಿರಿಬಿ ಕೊಟ್ರೇಶ್, ಪ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ತೋಟದ ರಾಮಣ್ಣ, ಕಾಂಗ್ರೆಸ್ ಮುಖಂಡರಾದ ಆಚೆಮನಿ ಮಲ್ಲಿಕಾರ್ಜುನ, ಅಶೋಕ್, ಶಿವಕುಮಾರ ಗೌಡ ಹ್ಯಾಳ್ಯಾ, ಬಡಿಗೇರ್ ಕೊಟ್ರೇಶ್ ಮುಂತಾದವರು ಉಪಸ್ಥಿತರಿದ್ದರು.
ಕೊಟ್ಟೂರು : ಬಿಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಐ.ದಾರುಕೇಶ್ ಗೆಲುವು
![09 darukesh 16.10.2023 ಕೊಟ್ಟೂರು : ಬಿಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಐ.ದಾರುಕೇಶ್ ಗೆಲುವು](https://janathavani.com/wp-content/uploads/2023/10/09-darukesh-16.10.2023-860x387.jpg)