ಮಲೇಬೆನ್ನೂರಿನಲ್ಲಿ ಜಾಗೃತಾ ಮೇಳ

ಮಲೇಬೆನ್ನೂರಿನಲ್ಲಿ ಜಾಗೃತಾ ಮೇಳ

ಮಲೇಬೆನ್ನೂರು, ಅ.11- ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿಯಲ್ಲಿ ಸಂಘದ ಆಡಳಿತ ಮಂಡಳಿ ಸದಸ್ಯರಿಗೆ ಮತ್ತು ರೈತರಿಗೆ, ಗ್ರಾಹಕರಿಗೆ ನಬಾರ್ಡ್ ಹಾಗೂ ಡಿಸಿಸಿ ಬ್ಯಾಂಕ್ ವತಿಯಿಂದ ಆರ್ಥಿಕ ಸಾಕ್ಷರತಾ ಕಾರ್ಯಕ್ರಮದಡಿಯಲ್ಲಿ ಡಿಜಿಟಲ್ ವ್ಯವಹಾರದ ಬಗ್ಗೆ ಜಾಗೃತಾ ಮೇಳವನ್ನು ಮಂಗಳವಾರ ಹಮ್ಮಿಕೊಳ್ಳಲಾಗಿತ್ತು.

ಡಿಸಿಸಿ ಬ್ಯಾಂಕಿನ ಮೇಲ್ವಿಚಾರಕ ಲೋಕೇಶ್ ನಾಯ್ಕ ಮಾತನಾಡಿದರು. ಸಂಘದ ಅಧ್ಯಕ್ಷರಾದ ಶ್ರೀಮತಿ ರೇವಮ್ಮ ಐರಣಿ ಪುಟ್ಟಪ್ಪ, ನಿರ್ದೇಶಕರಾದ ಜಿ.ಮಂಜುನಾಥ್ ಪಟೇಲ್, ಪಿ.ಆರ್.ಕುಮಾರ್, ಯುನೂಸ್, ಕೆ.ಜಿ.ಪರಮೇಶ್ವರಪ್ಪ ಮತ್ತು ಎಸ್.ಎಂ.ಮಂಜುನಾಥ್, ವೈ.ನಾಗೇಶಪ್ಪ ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು. ಸಂಘದ ಸಿಇಓ ಸಿದ್ದಪ್ಪ ಸ್ವಾಗತಿಸಿದರು. ಪಿಗ್ಮಿ ಏಜೆಂಟ್ ಪ್ರಕಾಶ್ ವಂದಿಸಿದರು.

error: Content is protected !!