ಮಗುವಿಗೆ ಲಸಿಕೆಗಳನ್ನು ತಪ್ಪದೇ ಹಾಕಿಸಿ

ಮಗುವಿಗೆ ಲಸಿಕೆಗಳನ್ನು ತಪ್ಪದೇ ಹಾಕಿಸಿ

ಮಲೇಬೆನ್ನೂರು, ಸೆ.13- ದೇವರಬೆಳಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ ಕುಣೆಬೆಳಕೆರೆ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಸೋಮವಾರ “ತೀವ್ರತರವಾದ ಮಿಷನ್‌ ಇಂದ್ರಧನುಷ್‌ 5.0 ಅಭಿಯಾನ” ಕಾರ್ಯಕ್ರಮ ನಡೆಸಲಾಯಿತು. 

ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿಗಳೂ ಆದ ತಾ. ನೋಡಲ್‌ ಅಧಿಕಾರಿ ಡಾ. ಮುರುಳೀ ಧರ್‌ ಅವರು ಕಾರ್ಯಕ್ರಮದಲ್ಲಿ ಭಾಗಿ ಯಾಗಿ ನಿಮ್ಮ ಮಗುವಿಗೆ ಕಡ್ಡಾಯವಾಗಿ ಹಾಕಿಸಬೇಕಾದ ಲಸಿಕೆಗಳನ್ನು ಪೂರ್ಣ ಗೊಳಿಸಿ ಅವರನ್ನು ರೋಗಗಳಿಂದ ದೂರ ವಿಡಿ ಎಂದು ತಾಯಂದಿರಿಗೆ ಹೇಳಿದರು.

ತಾ. ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎಂ. ಉಮ್ಮಣ್ಣ, ಆರೋಗ್ಯ ಸುರಕ್ಷಾಧಿಕಾರಿ ಸುಧಾಸುಲೇಖ, ಕ್ಷಯ ರೋಗ ಮೇಲ್ವಿಚಾರಕ ಮಂಜುನಾಥ್‌, ಅವರು ಮಿಷನ್‌ ಇಂದ್ರಧನುಷ್‌ ಅಭಿಯಾನ ಕುರಿತು ಮಾಹಿತಿ ನೀಡಿದರು.

ಆರೋಗ್ಯ ಕೇಂದ್ರದ ರೇಖಾ, ನಯನಾರೆಡ್ಡಿ, ಅಕ್ಷತಾ ಸೇರಿದಂತೆ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರು ಈ ವೇಳೆ ಹಾಜರಿದ್ದು, ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

error: Content is protected !!