ಅರಣ್ಯ ಇಲಾಖೆ ಬೋನಿಗೆ ಸೆರೆಯಾದ ಚಿರತೆ: ಜನರಲ್ಲಿನ ಆತಂಕ ದೂರ

ಅರಣ್ಯ ಇಲಾಖೆ ಬೋನಿಗೆ ಸೆರೆಯಾದ ಚಿರತೆ: ಜನರಲ್ಲಿನ ಆತಂಕ ದೂರ

ನ್ಯಾಮತಿ, ಸೆ. 7- ತಾಲ್ಲೂಕಿನ ಗುಡ್ಡದಂಚಿನ ಮಾದಾಪುರ ಗ್ರಾಮದಲ್ಲಿ ಅರಣ್ಯ ಇಲಾಖೆಯು ಇರಿಸಿದ್ದ ಬೋನಿಗೆ ಚಿರತೆಯೊಂದು ಸೆರೆಯಾಗುವ ಮೂಲಕ ಗ್ರಾಮಸ್ಥರಲ್ಲಿನ ಆತಂಕ ದೂರಾಗಿದೆ.

ಸುಮಾರು ಆರೇಳು ವರ್ಷದ ಗಂಡು ಚಿರತೆಯು ಗುರುವಾರ ಮುಂಜಾನೆ ಬೋನಿಗೆ ಬಿದ್ದಿದ್ದು, ಶಿವಮೊಗ್ಗ ಜಿಲ್ಲೆಯ ಹುಲಿ-ಸಿಂಹಧಾಮಕ್ಕೆ ಬಿಡುವುದಾಗಿ ಹೊನ್ನಾಳಿ ಪ್ರಾದೇಶಿಕ ವಲಯ ಅರಣ್ಯ ಅಧಿಕಾರಿ ಕೆ.ಆರ್. ಚೇತನ್ ತಿಳಿಸಿದ್ದಾರೆ.

ಉಪ ವಲಯ ಅರಣ್ಯಾಧಿಕಾರಿ ಬರ್ಕತ್ ಅಲಿ, ಎಂ.ಬಿ. ಫಾರೆಸ್ಟರ್ ನಿಂಗರಾಜ್, ಕೃಷ್ಣಮೂರ್ತಿ, ಚಾಂಗ್ ಮತ್ತು ಅರಣ್ಯ ವೀಕ್ಷಕ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

error: Content is protected !!