ವಿದೇಶ ಪ್ರವಾಸ : ತರಳಬಾಳು ಶ್ರೀಗಳಿಗೆ ಸ್ವಾಗತ

ವಿದೇಶ ಪ್ರವಾಸ : ತರಳಬಾಳು ಶ್ರೀಗಳಿಗೆ ಸ್ವಾಗತ

 ಗಣಕ ವಚನ ಸಂಪುಟ ಮೊಬೈಲ್ ಆಪ್ ಅನ್ನು‌ ಮತ್ತಷ್ಟು ಸಮಗ್ರಗೊಳಿಸಲು ಅನಿವಾಸಿ ಭಾರತೀಯ‌ ಕಂಪ್ಯೂಟರ್ ವಿಜ್ಞಾನಿಗಳೊಡನೆ ಸಮಾಲೋಚಿ‌ಸಿದ್ದಾಗಿ ಹೇಳಿದ ತರಳಬಾಳು ಶ್ರೀ

ಸಿರಿಗೆರೆ, ಆ. 26- ಗಣಕ ವಚನ ಸಂಪುಟ ಮೊಬೈಲ್ ಆಪ್ ಅನ್ನು‌ ಮತ್ತಷ್ಟು ಸಮಗ್ರ ಗೊಳಿಸಲು ತಮ್ಮ ವಿದೇಶಿ ಪ್ರವಾಸ‌ ಸಂದ ರ್ಭದಲ್ಲಿ, ಅನಿವಾಸಿ ಭಾರತೀಯ‌ ಕಂಪ್ಯೂಟರ್ ವಿಜ್ಞಾನಿಗಳೊಡನೆ ಸಮಾಲೋಚಿ‌ಸಿದ್ದಾಗಿ ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಒಂದು ತಿಂಗಳ ವಿದೇಶ ಪ್ರವಾಸ ಪೂರೈಸಿ ಶನಿವಾರ ಸಿರಿಗೆರೆಗೆ ಹಿಂದಿರುಗಿದ ‌ಸಂದರ್ಭದಲ್ಲಿ, ಬೃಹನ್ಮಠದ ಐಕ್ಯಮಂಟಪದಲ್ಲಿ ತಮ್ಮನ್ನು ಸ್ವಾಗತಿಸಿದ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಾರ್ವಜನಿಕರ ನ್ನುದ್ದೇಶಿಸಿ ಶ್ರೀಗಳು ಮಾತನಾಡಿದರು.

ವಿದೇಶಗಳಲ್ಲಿ ತಾವು‍ ಮಾಡಿದ ಶರಣ ಸಾಹಿತ್ಯ ಪ್ರಚಾರ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಬಗ್ಗೆ ಸ್ವಾಮೀಜಿ ವಿವರಿಸಿದರು. ಬೆಂಗಳೂರು ತರಳಬಾಳು ಕೇಂದ್ರದಲ್ಲಿ ಚಂದ್ರಯಾನ 3ರ ಇಸ್ರೋ ವಿಜ್ಞಾನಿಗಳ ತಂಡದಲ್ಲಿದ್ದ, ಶ್ರೀ ತರಳಬಾಳು ಜಗದ್ಗುರು ವಿದ್ಯಾ ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳನ್ನು ಸನ್ಮಾನಿಸುವುದಾಗಿ ತಿಳಿಸಿದ ಶ್ರೀಗಳು, ಅವರಂತೆ ಸಾಧನೆ ಮಾಡಲು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಪ್ರೊ.ಎಸ್.ಬಿ.ರಂಗನಾಥ್, ಆಡಳಿತಾಧಿಕಾರಿ ಡಾ. ಎಚ್.ವಿ.ವಾಮದೇವಪ್ಪ, ಅಣ್ಣನ ಬಳಗದ ಅಧ್ಯಕ್ಷ ಸಿ.ಎಸ್.ಮರುಳಸಿದ್ದಯ್ಯ, ತೀರ್ಥಪ್ಪ, ಮಂಜುನಾಥ್, ನಾಗರಾಜ್, ದೇವರಾಜ್, ಬಸವರಾಜಯ್ಯ ಮತ್ತಿತರರು ಈ ಸಂದರ್ಭದಲ್ಲಿದ್ದರು.

error: Content is protected !!