ಉಚ್ಚೆಂಗೆಮ್ಮ ದೇವಿ ಹುಂಡಿಯಲ್ಲಿ 73 ಲಕ್ಷ ಸಂಗ್ರಹ

ಉಚ್ಚೆಂಗೆಮ್ಮ ದೇವಿ ಹುಂಡಿಯಲ್ಲಿ 73 ಲಕ್ಷ ಸಂಗ್ರಹ

ಹರಪನಹಳ್ಳಿ, ಏ. 27- ಇಲ್ಲಿನ ಐತಿಹಾಸಿಕ, ಧಾರ್ಮಿಕ ಕ್ಷೇತ್ರ ಉಚ್ಚೆಂಗೆಮ್ಮ ದೇವಿ ದೇವಸ್ಥಾನದಲ್ಲಿ ಬುಧವಾರ ಕಾಣಿಕೆ ಹುಂಡಿ ಎಣಿಕೆ ಮಾಡಲಾಗಿದ್ದು, ಹುಂಡಿಯಲ್ಲಿ 73,35,889 ರೂ. ಸಂಗ್ರಹವಾಗಿದೆ ಎಂದು ಶ್ರೀ ಉತ್ಸವಾಂಭ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಹೆಚ್. ಮಲ್ಲಪ್ಪ ತಿಳಿಸಿದ್ದಾರೆ.

ಉಚ್ಚೆಂಗೆಮ್ಮ ದೇವಸ್ಥಾನದ ಹುಂಡಿಯಲ್ಲಿ ಸಂಗ್ರಹವಾದ ಹಣವನ್ನು ಉಚ್ಚಂಗಿದುರ್ಗದ  ಕರ್ನಾಟಕ ಗ್ರಾಮೀಣ ಬ್ಯಾಂಕ್  ಅಧಿಕಾರಿಗಳಿಗೆ ದೇವಸ್ಥಾನದ ಖಾತೆಗೆ ಜಮಾ ಮಾಡಲು ಹಸ್ತಾಂತರ ಮಾಡಲಾಯಿತು. 

ಈ ಹಿಂದೆ ನವೆಂಬರ್ 12 ರಂದು ಎಣಿಕೆ ನಡೆದಿತ್ತು. ಈ ಸಂದರ್ಭದಲ್ಲಿ ದೇವಸ್ಥಾನ ಸಮಿತಿಯ ಅಧ್ಯಕ್ಷರಾದ ಮಂಜುನಾಥ ಗೌಡ, ಸದಸ್ಯರಾದ ಹೆಚ್‌. ಜಯ್ಯಪ್ಪ, ಎಸ್. ಶಿವಪ್ಪ, ಕಟ್ಟಿಗೆ ಪರಶುರಾಮಪ್ಪ, ಗ್ರಾಮಸ್ಥರಾದ ನಾಗೇಂದ್ರಪ್ಪ, ಅರ್ಚಕರು,ಬ್ಯಾಂಕ್ ಮಾನೇಜರ್ ಉಲ್ಲಾಸ್ ರೆಡ್ಡಿ ಅರಸೀಕೆರೆ ಪೊಲೀಸ್ ಸಿಬ್ಬಂದಿಯಾದ ನಟರಾಜ್, ಬಳ್ಳಾರಿ ಧಾರ್ಮಿಕ ದತ್ತಿ ಇಲಾಖೆಯ ಪರಿವೀಕ್ಷಕ ಚೇತನ್, ದೇವಸ್ಥಾನದ ಸಿಬ್ಬಂದಿಗಳು ಉಪಸ್ಥಿತರಿದ್ದರು.

error: Content is protected !!