ಕಡ್ಡಾಯ ಮತದಾನದ ಕಾನೂನು ಜಾರಿಯಾಗಬೇಕು
ಇತ್ತೀಚಿನ ದಿನಗಳಲ್ಲಿ ಚುನಾವಣೆ ಬಂತೆಂದರೆ ಶೇಕಡವಾರು ಮತದಾನ ಕಡಿಮೆಯಾಗಿದೆ ಎಂಬುದು ಚರ್ಚಿತ ವಿಚಾರ. ಲೋಕಸಭೆ, ವಿಧಾನಸಭೆ, ಮಹಾನಗರ ಪಾಲಿಕೆ, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಸೇರಿದಂತೆ ಯಾವುದೇ ಚುನಾವಣೆಗಳು ನಡೆದರೂ ಮತದಾನ ಪ್ರಮಾಣ ಹೆಚ್ಚಾಗಬೇಕು.
ಇತ್ತೀಚಿನ ದಿನಗಳಲ್ಲಿ ಚುನಾವಣೆ ಬಂತೆಂದರೆ ಶೇಕಡವಾರು ಮತದಾನ ಕಡಿಮೆಯಾಗಿದೆ ಎಂಬುದು ಚರ್ಚಿತ ವಿಚಾರ. ಲೋಕಸಭೆ, ವಿಧಾನಸಭೆ, ಮಹಾನಗರ ಪಾಲಿಕೆ, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಸೇರಿದಂತೆ ಯಾವುದೇ ಚುನಾವಣೆಗಳು ನಡೆದರೂ ಮತದಾನ ಪ್ರಮಾಣ ಹೆಚ್ಚಾಗಬೇಕು.
ದಾವಣಗೆರೆ ಸ್ಮಾರ್ಟ್ ಸಿಟಿ ಆಗುತ್ತಿದ್ದರೂ, ನಾವು ಇನ್ನೂ ಸ್ಮಾರ್ಟ್ ಆಗಬೇಕಿದೆ. ಜನಸಾಮಾನ್ಯರು ಸಂಚಾರಿ ನಿಯಮಗಳನ್ನು ಪಾಲಿಸುವುದರಲ್ಲಿ ಯಾಕೋ ಏನೋ ಇನ್ನೂ ತಾತ್ಸಾರದ ಭಾವನೆ.
ದಾವಣಗೆರೆ ಅತೀ ವೇಗವಾಗಿ ಬೆಳೆಯುತ್ತಿರುವ ನಗರವೆಂದು ಹೆಸರು ಬಂದಿದೆ
ಸ್ಮಾರ್ಟ್ ಸಿಟಿ ದಾವಣಗೆರೆ ನಗರ 4 ದಿಕ್ಕುಗಳಲ್ಲಿ ಶರವೇಗದಿಂದ ಬೆಳೆಯುತ್ತಲಿದೆ. ಸರ್ವತೋಮುಖ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿರುವ ನಗರದಲ್ಲಿ ಸಾರ್ವಜನಿಕರು ತಮ್ಮ ಅಗತ್ಯ ಸೇವೆಗಳಿಗಾಗಿ ಮತ್ತು ಮೂಲಭೂತ ಸೌಕರ್ಯಗಳನ್ನು ಪಡೆಯಲು ಮಹಾನಗರ ಪಾಲಿಕೆಗೆ ಹೋಗಲೇಬೇಕು.
ದಾವಣಗೆರೆ ನಗರವನ್ನು ಸ್ಮಾರ್ಟ್ ಸಿಟಿಯಾಗಿ ಮಾಡಲಾಗುವುದೆಂಬ ಘೋಷಣೆ ಯಾದಾಗಿನಿಂದ ನಗರದಲ್ಲಿ ಕಾಮಗಾರಿಗಳ ಹೆಸರಿನಲ್ಲಿ ಅನೇಕ ಕರಾಮತ್ತುಗಳೇ ನಡೆದಿವೆ. ಅದನ್ನು ಪುಸ್ತಕ ರೂಪದಲ್ಲೂ ಬರೆಯಬಹುದು.
ಸ್ಮಾರ್ಟ್ ಸಿಟಿ, ವಿದ್ಯಾನಗರಿ ಎಂದು ಹೆಸರಾಗಿರುವ ಮಧ್ಯ ಕರ್ನಾಟಕದ ಮಹಾನಗರ ದಾವಣಗೆರೆ. ಇಲ್ಲಿ ವೃತ್ತಿಪರ ಮತ್ತು ಸಾಮಾನ್ಯ ಶಿಕ್ಷಣಕ್ಕೆ ಸಂಬಂಧಿಸಿದಂತೆ ಖಾಸಗೀ ಸಂಸ್ಥೆಗಳೇ ಹೆಚ್ಚು. ಅಂತಹುದರಲ್ಲಿ ಕೆಲವು ವರ್ಷಗಳ ಹಿಂದೆ ಚಿಕ್ಕದಾಗಿ ಪ್ರಾರಂಭವಾದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕೂಡ ಒಂದು.
ಪ್ರತಿನಿತ್ಯ ಟಿ.ವಿ. ಪತ್ರಿಕೆಗಳಲ್ಲಿ ನೋಡುತ್ತಲೇ ಬರುತ್ತಿದ್ದೇವೆ. ಮಾನವ ನಿರ್ಮಿತ ಮಹಾಪರಾಧಗಳು ಒಂದೇ, ಎರಡೇ. ಗಾಯಗಳ ಮೇಲೆ ಬರೆ ಎಳೆದಂತೆ ಪ್ರತಿನಿತ್ಯ ಹೆಚ್ಚಾಗುತ್ತಲೇ ಇವೆ.
ಇತ್ತೀಚಿನ ದಿನಗಳಲ್ಲಿ ಬಡ ಕುಟುಂಬಗಳ ಉಳಿತಾಯ ಕಡಿಮೆಯಾಗಿ, ಸಾಲಗಳು ದುಪ್ಪಟ್ಟಾಗುತ್ತಿವೆ. ದುಡಿದ ಹಣದಲ್ಲಿ ಹೆಚ್ಚು ಆರೋಗ್ಯ ಮತ್ತು ಶಿಕ್ಷಣಕ್ಕೆ ಖರ್ಚು ಮಾಡಬೇಕಾಗುತ್ತಿದೆ.
ಚಿತ್ರದುರ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಲ್ಲಿ 65 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು ಆರು ದರ್ಜೆಯ ಎಲ್ಲಾ ಹುದ್ದೆಗಳಿಗೂ ದುಬಾರಿ ಶುಲ್ಕ ವಿಧಿಸಿರುವುದು ಸರಿಯಲ್ಲ.
ಕನ್ನಡ-ಕನ್ನಡಿಗ-ಕರ್ನಾಟಕ ಇವುಗಳಿಗೆ ಸಂಬಂಧಿಸಿದಂತೆ ಜಲ ಸಂಪನ್ಮೂಲದ ಬಳಕೆ, ವಿದ್ಯುಚ್ಛಕ್ತಿಯ ಉತ್ಪಾದನೆ ಮತ್ತು ಬಳಕೆ, ಶಿಕ್ಷಣದ ಭಾಷೆ ಮತ್ತು ಬುದ್ಧಿವಂತಿಕೆ, ಉದ್ಯೋಗ ವ್ಯವಸ್ಥೆಗಳು ಮುಂತಾಗಿ ಎಲ್ಲಾ ಕ್ಷೇತ್ರಗಳಲ್ಲೂ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯಗಳ ಸರಪಳಿಗೆ ಸಂಬಂಧಿಸಿದ ಕೆಲವು ವಿಚಾರಗಳನ್ನು ನಿಮ್ಮ ತೀವ್ರ ಅವಗಾಹನೆಗೆಂದು ತಿಳಿಸಲಿಚ್ಚಿಸುತ್ತೇನೆ.
ಇಂದಿನ ಯಾಂತ್ರಿಕ ಜೀವನದಲ್ಲಿನ ಜಂಜಾಟದಲ್ಲಿ ಮಹಾ ನಗರಗಳಲ್ಲಿ ಗಂಡ-ಹೆಂಡತಿಯರಿಬ್ಬರೂ ಒಟ್ಟಿಗೆ ದುಡಿದು ಸಂಸಾರ ಸಾಗಿಸುವ ಕಾಲವಿದು. ಅವರು ತಮ್ಮ ಮಕ್ಕಳನ್ನು ಸಾಕಲು ಮನೆಯ ಕೆಲಸ ಮಾಡಲು ಸಹಾಯಕರನ್ನು ಇಟ್ಟುಕೊಂಡು ಕುಟುಂಬವನ್ನು ನಿರ್ವಹಿಸಬೇಕು.
ದಾವಣಗೆರೆ ನಗರದ ಎಂಸಿಸಿ ಎ ಬ್ಲಾಕ್ನ ಖಾಲಿ ನಿವೇಶನದಲ್ಲಿ ಭಾರೀ ಕಸದ ರಾಶಿ ಬಿದ್ದಿದೆ. ಆದರೂ ಪಾಲಿಕೆ ಸಿಬ್ಬಂದಿ ಸ್ವಚ್ಛತಾ ಕ್ರಮ ತೆಗೆದುಕೊಂಡಿಲ್ಲ.