ಶಿವ ಸಹಕಾರಿ ಬ್ಯಾಂಕಿಗೆ ಡಾ. ಕುರ್ಕಿ, ನಂಜನಗೌಡರು

ಶಿವ ಸಹಕಾರಿ ಬ್ಯಾಂಕಿಗೆ ಡಾ. ಕುರ್ಕಿ, ನಂಜನಗೌಡರು - Janathavaniದಾವಣಗೆರೆ, ಫೆ.3- ನಗರದ ಪ್ರತಿಷ್ಠಿತ ಶಿವ ಸಹಕಾರಿ ಬ್ಯಾಂಕ್ ಆಡಳಿತ ಮಂಡಳಿಯ ವೃತ್ತಿಪರ ನಿರ್ದೇಶಕರಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಜಿಲ್ಲಾಧ್ಯಕ್ಷ ಡಾ. ಹೆಚ್.ಎಸ್. ಮಂಜುನಾಥ ಕುರ್ಕಿ ಮತ್ತು ಬ್ಯಾಂಕಿನ ವ್ಯವಸ್ಥಾಪನಾ ಸಮಿತಿ ಸದಸ್ಯರಾಗಿ ಹರಪನಹಳ್ಳಿಯ ಹಿರಿಯ ಲೆಕ್ಕ ಪರಿಶೋಧಕ ಜಿ.ನಂಜನಗೌಡರು ನೇಮಕಗೊಂಡಿದ್ದಾರೆ.

ಬ್ಯಾಂಕಿನ ಅಧ್ಯಕ್ಷ ಎಂ.ಬಿ. ಸಂಗಮೇಶ್ವರ ಗೌಡರ ಅಧ್ಯಕ್ಷತೆಯಲ್ಲಿ ಬ್ಯಾಂಕಿನ ಸಭಾಂಗಣದಲ್ಲಿ ನಿನ್ನೆ ನಡೆದ ಬ್ಯಾಂಕಿನ ಆಡಳಿತ ಮಂಡಳಿ ಸಭೆಯಲ್ಲಿ ಈ ನೇಮಕ ನಡೆಯಿತು.

ಉಪಾಧ್ಯಕ್ಷ ಸಿ. ಚಂದ್ರಶೇಖರ್, ನಿರ್ದೇಶಕರುಗಳಾದ ದೊಗ್ಗಳ್ಳಿ ಎಂ. ಬಸವರಾಜ್, ಬಿ.ಎಸ್. ಪ್ರಕಾಶ್, ಡಿ.ಹೆಚ್. ಪ್ರಭು, ಕೆ.ಪಿ. ಪ್ರದೀಪ್, ಜಿ. ಸಿದ್ದಪ್ಪ, ಜಿ.ಪಿ. ವಾಗೀಶಬಾಬು, ಜೆ.ಎಸ್.ಸಿದ್ದಪ್ಪ, ಶ್ರೀಮತಿ ಎನ್. ವಸಂತ, ಶ್ರೀಮತಿ ಡಿ.ನಿರ್ಮಲ, ವೃತ್ತಿಪರ ನಿರ್ದೇಶಕ ಈ. ಚಂದ್ರಣ್ಣ ಅವರುಗಳು ಸಭೆಯ ಕಾರ್ಯಕಲಾಪಗಳಲ್ಲಿ ಭಾಗವಹಿಸಿದ್ದರು.

ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಎ.ಆರ್. ಸಿದ್ದರಾಮಪ್ಪ ಅವರು ಸಭೆಗೆ ವಿಷಯ ಮಂಡಿಸಿದರು.

error: Content is protected !!