ವಾಸವಿ ಕ್ಲಬ್ ದೇವನಗರಿ ಅಧ್ಯಕ್ಷರಾಗಿ ಕೆ.ವಿ.ರಂಗನಾಥ್

ವಾಸವಿ ಕ್ಲಬ್ ದೇವನಗರಿ ಅಧ್ಯಕ್ಷರಾಗಿ ಕೆ.ವಿ.ರಂಗನಾಥ್ - Janathavaniದಾವಣಗೆರೆ, ಜ. 28- ವಾಸವಿ ಕ್ಲಬ್ ದೇವನಗರಿಗೆ 2022ನೇ ಸಾಲಿನ  ಅಧ್ಯಕ್ಷರಾಗಿ ಕೆ.ವಿ.ರಂಗನಾಥ್, ಪ್ರಧಾನ ಕಾರ್ಯದರ್ಶಿಯಾಗಿ ಶ್ರೀಮತಿ ಬಿ.ಸಿ.ವರಮಹಾಲಕ್ಷ್ಮಿ, ಖಜಾಂಚಿಯಾಗಿ ಪಿ.ಎಸ್. ರವಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ನಗರದ ರೋಟರಿ ಬಾಲಭವನದಲ್ಲಿ ನಾಡಿದ್ದು ದಿನಾಂಕ 30ರ ಭಾನುವಾರ ಬೆಳಿಗ್ಗೆ 11.30ಕ್ಕೆ ಹಾಲಿ ಅಧ್ಯಕ್ಷ ಆರ್.ಸಿ.ರಮೇಶ್ ಅಧ್ಯಕ್ಷತೆಯಲ್ಲಿ ನಡೆಯುವ ಪದಗ್ರಹಣ ಕಾರ್ಯಕ್ರಮದಲ್ಲಿ ಕ್ಲಬ್‍ನ ರಾಜ್ಯಪಾಲ ಆರ್. ಶ್ರೀನಿವಾಸ್ ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಲಿದ್ದಾರೆ.

ಮುಖ್ಯ ಅತಿಥಿಗಳು : ಸಿಎಂಎಲ್ ದಿಲೀಪ್, ಕ್ಯಾಬಿನೆಟ್ ಸೆಕ್ರೆಟರಿ ಬಿ. ನಾಗಮಹೇಶ್, ಪಿ.ವಿ.ಲಕ್ಷ್ಮಿನಾರಾಯಣ ಶೆಟ್ಟಿ, ಕೆ.ಆರ್.ಶಂಕರ್, ಕಲಾ ಪ್ರದೀಪ್, ಎನ್. ಶ್ಯಾಮ್ ಸುಂದರ್, ಬಿ.ಎ. ಚಂದ್ರಕುಮಾರ್ ಶೆಟ್ಟಿ,  ಕೆ.ಜೆ. ಪ್ರಸಾದ್.

error: Content is protected !!