ನಗರದಲ್ಲಿ ಇಂದಿನಿಂದ ಮೂರು ದಿನ ದಿಂಡಿ ಮಹೋತ್ಸವ

ಬಂಬೂಬಜಾರ್ ಗೋಂದಳಿ ಸಮಾಜದ ಶ್ರೀ ವಿಠಲ ರುಖುಮಾಯಿ ಹರಿ ಮಂದಿರದಲ್ಲಿ 60 ನೇ ವರ್ಷದ ದಿಂಡಿ ಮಹೋತ್ಸವದ ಅಂಗವಾಗಿ ವಿಶ್ವಶಾಂತಿಗಾಗಿ ಶ್ರೀ ಗ್ರಂಥರಾಜ ಜ್ಞಾನೇಶ್ವರಿಯ ಸಾಮುದಾಯಿಕ ಪಾರಾಯಣ ಮತ್ತು ಅಖಂಡ ಹರಿನಾಮ ಸಪ್ತಾಹವು ಇಂದಿನಿಂದ ಇದೇ ದಿನಾಂಕ 9 ರವರೆಗೆ ನಡೆಯಲಿದೆ.

ಪ್ರತಿ ದಿನ ಬೆಳಿಗ್ಗೆ 4 ರಿಂದ 6 ಕಾಕಡಾರತಿ, ಬೆಳಿಗ್ಗೆ 7 ರಿಂದ 12 ರವರೆಗೆ ಸಾಮುದಾಯಿಕ ಪಾರಾಯಣ, ಸಂಜೆ 4.30 ರಿಂದ 6 ರವರೆಗೆ ನಾಮಜಪ, ಪ್ರವಚನ, ರಾತ್ರಿ 7 ರಿಂದ 9 ರವರೆಗೆ ಕೀರ್ತನೆ, ರಾತ್ರಿ 10.30 ರಿಂದ 1 ರವರೆಗೆ ಸಂಗೀತ, ಭಜನೆ, ಭಾರೂಡ ವ ಕಾರ್ಯಕ್ರಮಗಳು ಜರುಗಲಿವೆ.

ಇಂದು ಮಧ್ಯಾಹ್ನ 12 ರಿಂದ 1 ರವರೆಗೆ ಶ್ರೀ ಜಗದ್ಗುರು ತುಕಾರಾಮ್ ಮಹಾರಾಜ್ ಅನುಗ್ರಹದ ನಿಮಿತ್ಯ ಕೀರ್ತನೆ ಏರ್ಪಡಿಸಲಾಗಿದೆ. 

ಇಂದು ಲಕ್ಷ್ಮೇಶ್ವರದ ನಾರಾಯಣ ನಭಿಸೆ ಅವರ, ನಾಳೆ ಶನಿವಾರ ದೂಪದಾಳದ ಯಶವಂತ ಅಟಕ್ ಅವರಿಂದ ಕೀರ್ತನೆ ನಡೆಯಲಿದೆ. 

error: Content is protected !!